ವಿಜಯಸಾಕ್ಷಿ ಸುದ್ದಿ, ಗದಗ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಗದಗ ಜಿಲ್ಲಾ ಮಹಿಳಾ ಅಧ್ಯಕ್ಷೆ ಮಮತಾಜ ಕಟ್ಟಿಮನಿ ಹಾಗೂ ಗದಗ ಜಿಲ್ಲಾಧ್ಯಕ್ಷ ಎಮ್.ಎ. ಕುರ್ತಕೋಟಿ ಅವರ ನೇತೃತ್ವದಲ್ಲಿ ಸಾಧಕ ಮಹಿಳೆಯರನ್ನು ಬೆಟಗೇರಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ನಂ-6ರಲ್ಲಿ ಸನ್ಮಾನಿಸಲಾಯಿತು.
ಪ್ರಧಾನ ಗುರುಮಾತೆ ವಿ.ಕೆ. ಮುತಾಲಿಕ ದೇಸಾಯಿ, ಸಹ ಶಿಕ್ಷಕಿಯರಾದ ಎಸ್.ಎಮ್. ಹಳೇಮನಿ, ಎಸ್.ಎಮ್. ಕರಡಕಲ್ಲ, ವಾಯ್.ಎಚ್. ಹಡಪದ, ಎಸ್.ಎಸ್. ವನಹಳ್ಳಿ, ಎ.ಎಚ್. ಚಿಗರಿ, ಎಮ್.ಎಸ್. ತೊಂಡಿಹಾಳ, ಎಸ್.ಬಿ. ಇಟಗಿ ಇವರನ್ನು ವೇದಿಕೆಯ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರೋಣ ತಾಲೂಕಾ ಮಹಿಳಾ ಘಟಕದ ಅಧ್ಯಕ್ಷೆ ಸುವರ್ಣ ತೋಟಗೇರ, ಮೇರಿ ಕಾರಭಾರಿ, ನವೀದಾ ಕುರ್ತಕೋಟಿ, ಯಾಸ್ಮಿನ ಕಟ್ಟಿಮನಿ, ಶಾಹೀನ ಕುರ್ತಕೋಟಿ, ರಾಧೆ ಕಾರಭಾರಿ ಹಾಗೂ ಸ್ವಾಭಿಮಾನಿ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.