ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಿ ಆದ ಬದಲಾವಣೆಯಂತೆ ರಾಜ್ಯದಲ್ಲಿಯೂ ನಡೆಯಲಿದೆ: ಶ್ರೀರಾಮುಲು

0
Spread the love

ಮೊಳಕಾಲ್ಮುರು: ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಿ ಆದ ಬದಲಾವಣೆಯಂತೆ ರಾಜ್ಯದಲ್ಲಿಯೂ ನಡೆಯಲಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸರಕಾರ ರಚನೆಯಲ್ಲಿ ಆದ ಬದಲಾವಣೆಯಂತೆ ರಾಜ್ಯದಲ್ಲಿಯೂ ಮುಂದಿನ ದಿನದಲ್ಲಿ ರಾಜಕಾರಣ ನಡೆಯಲಿದೆ.

ಸಿಎಂ.ಸಿದ್ದರಾಮಯ್ಯ ಮಂಡಿಸಿರುವ ಏಳು ಲಕ್ಷ ಕೋಟಿ ರೂ ಬಜೆಟ್ ರಾಜ್ಯವನ್ನು ಸಾಲಕ್ಕೆ ಸಿಲುಕಿಸಿ ಹೊರೆಯಾಗಿಸಿದೆ. ಗ್ಯಾರಂಟಿ ಯೋಜನೆಗಳನ್ನು ನಿರ್ವಹಿಸಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 25 ಸಾವಿರ ಕೋಟಿ ರೂ ಹಣವನ್ನು ಬಳಕೆ ಮಾಡಿಕೊಂಡು ಈ ಸಮುದಾಯಗಳನ್ನು ಕಡೆಗಣಿಸಿದೆ.

ಶಕ್ತಿ ಯೋಜನೆಗೆ ಹಣ ನೀಡದೆ ಸಾರಿಗೆ ಸಿಬ್ಬಂದಿಗಳನ್ನು ಸಂಕಷ್ಟಕ್ಕೆ ದೂಡಲಾಗಿದೆ. ಆಯಾ ನಿಗಮದಲ್ಲಿನ ಹಣವನ್ನು ಹೊಂದಾಣಿಕೆ ಮಾಡಿಕೊಂಡು ನಿಗಮಗಳನ್ನು ನಡೆಸುವ ಹಂತ ತಲುಪಲಾಗಿದೆ. ಇಂದಿಗೂ 9000 ಕೋಟಿ ರೂ ಪಿಎಫ್ ಹಣವನ್ನು ತುಂಬದೆ ಬಾಕಿ ಉಳಿಸಿಕೊಂಡಿದೆ. ಈ ಎಲ್ಲಾ ಸರಕಾರದ ಸಂಕಷ್ಟಗಳ ಮಧ್ಯೆ ಮುಖ್ಯ ಮಂತ್ರಿ ಬದಲಾವಣೆಯ ಕೂಗು ಜೋರಾಗಿ ಕೇಳಿ ಬರುತ್ತಿದೆ ಎಂದರು.


Spread the love

LEAVE A REPLY

Please enter your comment!
Please enter your name here