ವಿಜಯಸಾಕ್ಷಿ ಸುದ್ದಿ, ಗದಗ: ಅವಳಿ ನಗರದಲ್ಲಿ 5 ರೂಪಾಯಿಗೆ ಹೊಟ್ಟೆ ತುಂಬಾ ಊಟ ನೀಡುವ ಖ್ಯಾತಿ ಪಡೆದ ಶ್ರೀ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಮರು ಚಾಲನೆ ನೀಡಿದರು.
ದಿ. ಕೆ.ಎಚ್.ಪಾಟೀಲ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ಸಿಹಿಯೊಂದಿಗೆ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ಜಿ.ಪಂ ಮಾಜಿ ಅಧ್ಯಕ್ಷರುಗಳಾದ ವಾಸಣ್ಣ ಕುರಡಗಿ, ಸಿದ್ದಲಿಂಗೇಶ್ವರ ಪಾಟೀಲ, ಹಿರಿಯರಾದ ಶಿವರುದ್ರಪ್ಪ ಕಳಸಾಪೂರ, ಗುರುಮೂರ್ತಿ ಮರೆಗುದ್ದಿ, ಜಿ.ಸಿ. ಓದುಮಠ, ಎಸ್.ಎಸ್. ಕೊಪ್ಪಳ, ಬಾಲಚಂದ್ರ ಕೋಟಿ, ಬಸವರಾಜ ಟೆಂಗಿನಕಾಯಿ, ಜಯಣ್ಣ ಶೆಟ್ಟರ, ಚುಳಕಿ, ಸಿ.ವಿ. ಹಿರೇಮಠ, ಸಿ.ಕೆ. ಚಟ್ಟಿ, ಗಂಗಾವತಿ, ಪ್ರಕಾಶ ಅಸುಂಡಿ ದಂಪತಿಗಳು, ಬಸವದಳದ ಅಧ್ಯಕ್ಷರಾದ ವಿ.ಕೆ. ಕರಿಗೌಡ್ರ ದಂಪತಿಗಳು, ಶೇಖಣ್ಣ ಕವಳಿಕಾಯಿ, ಬಸವರಾಜ ಹಡಗಲಿ, ಲಿಂಗದಾಳ ದಂಪತಿಗಳು, ಎಸ್.ವಿ. ಮುಗದ ದಂಪತಿಗಳು, ಐ.ಪಿ. ಮೈದುರಗಿ, ದಾನಯ್ಯ ಗಣಾಚಾರಿ, ಗಂಗಾಧರ ಹಿರೇಮಠ, ಎಂ.ಎಸ್. ಅಂಗಡಿ, ಎಸ್.ವಿ.ಹಿರೇಮಠ, ಶೇಖಣ್ಣ ಅರಳಿ, ಮುತ್ತು ಜಡಿ, ಶೈಲಜಾ, ಸುಭದ್ರಾ ಮುಂಡರಗಿ, ಶ್ರೀರಾಮಕೃಷ್ಣ ಸೇವಾ ಪ್ರತಿಷ್ಠಾನದ ಪದಾಧಿಕಾರಿಗಳಾದ ಮಂಜುನಾಥ ಬೊಮ್ಮನಕಟ್ಟಿ, ಎಸ್.ಎಸ್. ಕಳಸಾಪೂರ, ಮಂಜುನಾಥ ಭಗವತಿ, ಉಮೇಶ ಪೂಜಾರ, ವೆಂಕಟೇಶ ಇಮರಾಪೂರ ಮುಂತಾದವರು ಉಪಸ್ಥಿತರಿದ್ದರು.