ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ಮಾರುತೇಶ್ವರ ಹೊಂಡ ತುಳುಕಿಸುವ ಕಾರ್ಯಕ್ರಮದ ಅಂಗವಾಗಿ ಸಮೀಪದ ಜಕ್ಕಲಿ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದ ಮುಂದೆ ನೂರಾರು ಭಕ್ತರ ಸಮ್ಮುಖದಲ್ಲಿ ಹೊಂಡ ತುಳುಕಿಸುವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.
ಈ ವೇಳೆ ರಂಗಣ್ಣವರ ಮನೆತನದ ಕನಕಪ್ಪ ಅವರು ಹೊಂಡಕ್ಕೆ ಜಿಗಿದು ನೀರನ್ನು ತುಳುಕಿಸಿದರು. ಬಳಿಕ ಮಾರುತಿ ದೇವರ ಪಲ್ಲಕ್ಕಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಐದು ಸುತ್ತು ಪ್ರದಕ್ಷಿಣೆ ಹಾಕಿ ಭಕ್ತರು ಭಕ್ತಿಯನ್ನು ಸಮರ್ಪಿಸಿದರು. ಭಕ್ತರು ಕಾಯಿ, ಕರ್ಪೂರಗಳಿಂದ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು.
ಈ ವೇಳೆ ಚನ್ನಬಸವ ದೊಡ್ಡಮೇಟಿ, ಶೇಖರಪ್ಪ ಆದಿ, ಬಸವರಾಜ ಆರ್.ರಂಗಣ್ಣವರ, ಮುತ್ತಣ್ಣ ಕಡಗದ, ರಂಗನಾಥ ಜೋಷಿ, ಜಗದೀಶ ಪಲ್ಲೇದ, ಮುತ್ತಣ್ಣ ಪಾಟೀಲ, ಚನ್ನಬಸವ ಅರಹುಣಸಿ, ಚಂದ್ರು ಆದಿ, ಈಶ್ವರಪ್ಪ ಇಟಗಿ, ವೀರಪ್ಪ ತಳವಾರ, ಪರಮೇಶ ರಂಗಣ್ಣವರ, ಈಶ್ವರಪ್ಪ ಪಲ್ಲೇದ, ಅಶೋಕ ಮುಕ್ಕಣ್ಣವರ ಸೇರಿದಂತೆ ಭಕ್ತರು ಭಾಗವಹಿಸಿದ್ದರು.