ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ; 4 ಜನರ ಬಂಧನ, 50 ಸಾವಿರ ರೂ ವಶ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ

Advertisement

ಕೋವಿಡ್ ನಿಯಮಾವಳಿ ಉಲ್ಲಂಘಿಸಿ ನಡೆಯುತ್ತಿದ್ದ ಇಸ್ಪೀಟು ಜೂಜಾಟದ ಅಡ್ಡೆಯ ಮೇಲೆ ಶಿರಹಟ್ಟಿ
ಪೊಲೀಸರು ದಾಳಿ ಮಾಡಿ 4 ಜನರನ್ನು ಬಂಧಿಸಿದ್ದು, ನಾಲ್ಕು ಜನ ಪರಾರಿಯಾಗಿದ್ದಾರೆ.

ಶಿರಹಟ್ಟಿ ತಾಲೂಕಿನ ಕೆರಹಳ್ಳಿ ತಾಂಡದ ಬಸವಣ್ಣ ದೇವಸ್ಥಾನದ ಮುಂದೆ ಮಾಸ್ಕ್, ಸಾಮಾಜಿಕ ಅಂತರ ಮರೆತು ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಆರೋಪಿಗಳು ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದರು.

ಶಿರಹಟ್ಟಿ ಠಾಣೆಯ ಪಿಎಸ್ಐ ನವೀನ ಜಕ್ಕಲಿ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದರು.

ಜೂಜಾಟದಲ್ಲಿ ತೊಡಗಿದ್ದ ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದ ಯಲ್ಲಪ್ಪ ಬಸಪ್ಪ ಜೀವಿ, ಮುಂಡರಗಿಯ ರಾಜೇಸಾಬ್ ಸುಭಾನಸಾಬ್ ಡಂಬಳ, ಮುರಡಿತಾಂಡಾದ ಚನ್ನಪ್ಪ ದಾವಜಪ್ಪ ರಾಥೋಡ್, ಕೃಷ್ಣ ರಾಮಪ್ಪ ಅರ್ಕಸಾಲಿ, ಬಾಗೇವಾಡಿಯ ಚಿದಾನಂದ ಹಡಪದ, ಹಾಗೂ ಕೆರಹಳ್ಳ ತಾಂಡಾದ ಸುನಿಲ್ ಚಂದ್ರಪ್ಪ ಲಮಾಣಿ, ಕುಮಾರ್ ಶಿವಪ್ಪ ಲಮಾಣಿ, ಮಹಾಂತೇಶ್ ಲಮಾಣಿ ಇವರಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಉಳಿದ ನಾಲ್ವರು ಪೊಲೀಸರ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.

ಜೂಜಾಟ ಹಾಗೂ ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here