ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ಪ್ರಾಮಾಣಿಕ ಮತ್ತು ನಿಸ್ವಾರ್ಥ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪದಕ ಪಡೆದ ಪೊಲೀಸ್ ಸಿಬ್ಬಂದಿಯನ್ನು ಗ್ರಾಮದ ಲಕ್ಷ್ಮೀ ನಾರಾಯಣ ಪತ್ತಿನ ಸೌಹಾರ್ದ ಸಹಕಾರ ಸಂಘದ ಸದಸ್ಯರು ಸನ್ಮಾನಿಸಿ ಗೌರವಿಸಿದರು.
Advertisement
ಗದಗ ಗ್ರಾಮೀಣ ಪೊಲೀಸ್ ಠಾಣಿಯ ಸಿ.ಪಿ.ಐ ಸಿದ್ದರಾಮೇಶ ಗಡೇದ, ಸಬ್ಇನ್ಸೆಪೆಕ್ಟರ್ ಎಲ್.ಕೆ. ಜೂಲಕಟ್ಟಿ, ಹವಾಲ್ದಾರರಾದ ಬಸವರಾಜ ಗುಡ್ಲಾನೂರ, ಪೊಲೀಸ್ ಪೇದೆ ಪ್ರವೀಣ ಕಲ್ಲೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಸವರಾಜ ಮುಳ್ಳಾಳ, ತಾ.ಪಂ ಮಾಜಿ ಸದಸ್ಯ ಮಹೇಶ ಮುಸ್ಕಿನಭಾವಿ, ಪ್ರಕಾಶ ಅರಹುಣಶಿ, ಮೃತ್ಯುಂಜಯ ನಡುವಿನಮಠ, ಪ್ರವೀಣ ಕಲಾಲ, ಬಸವರಾಜ ಕವಲೂರ, ವಿನಾಯಕ ಡಿಗ್ಗಾವಿ, ವೀರಣ್ಣ ಅರಹುಣಶಿ, ಈರಣ್ಣ ಮೂಡಲತೋಟ, ಶಿವು ಭಜಂತ್ರಿ, ದೇವರಾಜ ದೇವರಾಜ ಕಮ್ಮಾರ ಸೇರಿದಂತೆ ಇತರರು ಇದ್ದರು.