ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ವಾರ್ಡ್ ನಂ.24ರ ಹಜರತ್ ಗನಶದ ಬಾಷಾ (ರ.ಹ) ದರ್ಗಾ ಅವರ ಗಂಧ ಮತ್ತು ಉರುಸಿನ ಆಚರಣೆ ವಿಜೃಂಭಣೆಯಿಂದ ಜರುಗಿತು. ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ಕಾರ್ಯಕ್ರಮನ್ನು ಉದ್ಘಾಟಿಸಿದರು.
ಹಜರತ್ ಗನಶದ್ ಬಾಷಾ ದರ್ಗಾದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಡಿ ಳವಡಿಸಿದ ಹೈಮಾಸ್ಟ್ ದೀಪವನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ದರ್ಗಾದಲ್ಲಿ ಫಾತೆಹಾ ಹಾಗೂ ಪೂಜೆ, ಅನ್ನಸಂತರ್ಪಣೆ ನೆರವೇರಿತು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ವಾಲ್ಮೀಕಿ ಸಮಾಜದ ಅಧ್ಯಕ್ಷ ಬಸವರಾಜ್ ಬೆಳದಡಿ, ನಗರಸಭೆ ಮಾಜಿ ಸದಸ್ಯ ಎಂ.ಸಿ. ಶೇಖ್, ನಗರಸಭೆ ಸದಸ್ಯರಾದ ಬರಕತಲಿ ಮುಲ್ಲಾ, ಜೂನಸಾಬ್ ನಮಾಜಿ, ಮುಖಂಡರಾದ ಅಬ್ದುಲ್ ಮುನಾಫ್ ಮುಲ್ಲಾ, ಅಕ್ಕಿ ವಕೀಲರು, ಆಂಜನೇಯ ಕಟಗಿ, ಸಯ್ಯದ್ ಅಲ್ಲಬಕ್ಷಿ ಮಕಾಂದಾರ, ರಶೀದ್ ಮಕಾಂದಾರ, ಅನ್ವರ್ ನದಾಫ್, ಇಬ್ರಾಹಿಂ ಕಾಟಾಪುರ, ಸಲ್ಮಾನ್ ಬನ್ನೂರ, ರಂಗಪ್ಪ ಯರಗುಡಿ, ಮಂಜು ಲಕ್ಕುಂಡಿ, ಶಿವಪ್ಪ ತಿಪ್ಪಣ್ಣ ಬಳ್ಳಾರಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.