ಕಲಬುರಗಿ: ನ್ಯಾಷನಲ್ ಹೆರಾಲ್ಡ್ ಕೇಸ್: ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು..?

0
Spread the love

ಕಲಬುರಗಿ: ನ್ಯಾಷನಲ್ ಹೆರಾಲ್ಡ್ ಕೇಸ್ ಗೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೇ ನೀಡಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಕಳೆದ ಹನ್ನೊಂದು ವರ್ಷಗಳಿಂದ ಕೇಂದ್ರ ಸರ್ಕಾರ ಐಟಿ, ಇಡಿ ಯನ್ನ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಇಷ್ಟು ವರ್ಷ ಆಯಿತು ಎಲ್ಲಿ ಮನಿಲಾಂಡ್ರಿಗ್ ಆಗಿದೆ, ಹೇಗ್ ಆಗಿದೆ ಅಂತ ಪ್ರೂವ್ ಮಾಡಲು ಆಗಿಲ್ಲ ಅವರಿಂದ ಎಂದು ಕಿಡಿಕಾರಿದ್ದಾರೆ.

Advertisement

ಇನ್ನೂ ಇದು ಎಜಿ, ನ್ಯಾಷನಲ್ ಹೆರಾಲ್ಡ್ ಅಲ್ಲಿ ಇರಬಹುದು, ಬೇರೆ ಸಂಸ್ಥೆಗಳು ನಾಟ್ ಫಾರ್ ಬೆನೆಫಿಟ್ ಸಂಸ್ಥೆಗಳು. ಒಂದೂ ರೂಪಾಯಿ ಕೂಡ ಅವರು ಡಿವಿಡೆಂಟ್,ಸ್ಯಾಲರಿ ತೊಗೊಳ್ಳುವ ಹಾಗಿಲ್ಲ. ಆದ್ರು ಕೂಡ ಇವರು ಐಟಿ,

ಇಡಿ ಅವರು ವೈಯಕ್ತಿಕ ರಾಜಕೀಯ ದ್ವೇಷ ಸಾಧಿಸಲು ಕೇಂದ್ರದಿಂದ ಆರ್ಡರ್ ತೊಗೊಳ್ತಿದಾರೆ. ಯಾವಾಗ ಮೋದಿ ಅವರ ಜನಪ್ರಿಯತೆ ಕಡಿಮೆ ಆಗುತ್ತೆ, ಬೆಲೆ ಏರಿಕೆ ಬಗ್ಗೆ ಜನ ಪ್ರಶ್ನೆ ಮಾಡ್ತಾರೆ ಆಗ ಮಾತ್ರ ಐಟಿ, ಇಡಿ, ರಾಬರ್ಟ್ ವಾದ್ರಾ, ಸೋನಿಯಾ ಗಾಂಧಿ ಅವರು ನೆನಪಿಗೆ ಬರ್ತಾರೆ ಎಂದು ಕಿಡಿಕಾರಿದ್ದಾರೆ.


Spread the love

LEAVE A REPLY

Please enter your comment!
Please enter your name here