ರಾಷ್ಟ್ರ ಮಟ್ಟದ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಬಹುಮಾನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಮಹಾರಾಷ್ಟ್ರದ ಸೋಲ್ಹಾಪುರದಲ್ಲಿ ಜರುಗಿದ ರಾಷ್ಟ್ರಮಟ್ಟದ ಪ್ರಾಜೆಕ್ಟ್ ಪಾಲಿಟೆಕ್ನಿಕ್ ರೂರಲ್ ಪಾಲಿಟೆಕ್ನಿಕ್‌ನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಅಂತಿಮ ವರ್ಷದ ಡಿಪ್ಲೋಮಾ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ ಪ್ರಾಜೆಕ್ಟ್ ಗೆ ಪ್ರಥಮ ಸ್ಥಾನ ದೊರೆತಿದೆ.

Advertisement

ವಿಭಾಗದ ಮುಖ್ಯಸ್ಥ ಟಿ.ಜಿ. ಕಾಟೇವಾಲ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಬಸವರಾಜ ಪಾಮರಡ್ಡಿ ರಾಜು ಅಂಕಲಿ, ನಜೀರಹಮ್ಮದ ಅಡ್ವಾನಿ, ಮುತ್ತಪ್ಪ ಬಾರಕೇರ, ಅಭಯ ಭೀರಸಾಲ ಹಾಗೂ ದೇವಮ್ಮ ಕರ್ಲವಾಡ ಮಾದರಿಯನ್ನು ಸಿದ್ಧಪಡಿಸಿದ್ದರು.

ವಿದ್ಯಾರ್ಥಿಗಳಾದ ಮಲ್ಲಯ್ಯ ಹರ್ಲಾಪುರ, ರೇಣುಕಾ ಗಡಿಯಪ್ಪನವರ, ನಿರ್ಮಲಾ ಶಿವಳ್ಳಿ, ಕಳಕಪ್ಪಾ ಮೇಟಿ, ವಿಜಯಕುಮಾರ ರೋಣದ ಹಾಗೂ ಇರ್ಫಾನ ಕಳ್ಳಿಮನಿ ವಿನ್ಯಾಸಗೊಳಿಸಿದ ಪ್ರಾಜೆಕ್ಟ್ ಗೆ ದ್ವಿತೀಯ ಸ್ಥಾನ ದೊರೆತಿದೆ.

ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳಿಂದ ಸುಮಾರು 100ಕ್ಕೂ ಹೆಚ್ಚು ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆರ್.ಟಿ.ಇ ಸೊಸೈಟಿಯ ಕಾರ್ಯದರ್ಶಿ ಸಚಿನ್ ಡಿ.ಪಾಟೀಲ, ಆಡಳಿತ ಮಂಡಳಿಯ ಸದಸ್ಯರು, ಪ್ರಾಚಾರ್ಯರಾದ ಕೆ.ಎಚ್. ಓದುಗೌಡರ, ಪಾಲಿಟೆಕ್ನಿಕ್ ಇ&ಸಿ ವಿಭಾಗದ ಸಿಬ್ಬಂದಿಗಳಾದ ಆರ್.ಎಮ್. ಡಂಬಳ, ಜಿ.ಎನ್. ಸೊಲ್ಲಾಪುರ, ಜೆ.ಬಿ. ಬ್ಯಾಳಿ, ಈಶ್ರತ್ ಮುಲ್ಲಾ ಸೇರಿದಂತೆ ಕಾಲೇಜಿನ ಎಲ್ಲ ಉಪನ್ಯಾಸಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಸಾಧನೆಗೈದ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.


Spread the love

LEAVE A REPLY

Please enter your comment!
Please enter your name here