ವಿಜಯಸಾಕ್ಷಿ ಸುದ್ದಿ, ಗದಗ: ನಗರದಲ್ಲಿ ತಾಲೂಕಾ ಎಳೆನೀರು ವ್ಯಾಪಾರಸ್ಥರ ಸಂಘದ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ನೂತನ ಸಂಘದ ಅಧ್ಯಕ್ಷ ಮೆಹಬೂಬ ಸವಡಿ ಮಾತನಾಡಿ, ಸದರಿ ಸಂಘದ ಸ್ಥಾಪನೆಯ ಉದ್ದೇಶ ಎಳೆನೀರು ವ್ಯಾಪಾರಸ್ಥರನ್ನು ಸಂಘಟಿಸುವುದಾಗಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಹಾಗೂ ನಗರಸಭೆಯಿಂದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಸಂಘಟನೆಯ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡುವುದರ ಜೊತೆಗೆ ಪರಸ್ಪರ ಸಹಕಾರದಿಂದ ನಮ್ಮ ವ್ಯಾಪಾರ-ವಹಿವಾಟವನ್ನು ಸುಧಾರಿಸುವುದಲ್ಲದೆ, ಸಾಮಾಜಿಕ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದರು.
ಸಂಘದ ಉಪಾಧ್ಯಕ್ಷರಾಗಿ ಮಹಾಲಿಂಗಪ್ಪ ಬಸಪ್ಪ ನವಲೂರ, ಕಾರ್ಯದರ್ಶಿಯಾಗಿ ಹೈದರಅಲಿ ಎಚ್. ಮಕಾನದಾರ, ಖಜಾಂಚಿಯಾಗಿ ಶ್ಯಾಮ ಎಮ್.ನೆಲದುರ್ಗ, ಸಂಘಟನಾ ಕಾರ್ಯದರ್ಶಿಯಾಗಿ ಮೆಹಬೂಬ ಬರದೂರ, ಸದಸ್ಯರುಗಳಾಗಿ ಶಿವನಗೌಡ, ಪ್ರಮೋದ, ಅಬ್ದುಲ್, ಗಂಗವ್ವ, ಅಬುಬಕರ, ಜಹಾಂಗೀರ, ಕಾನೂನು ಸಲಹೆಗಾರರಾಗಿ ಆಯ್ಕೆಯಾದ ಎಂ.ಎಂ. ಮೌಲ್ವಿ ವಕೀಲರು ಉಪಸ್ಥಿತರಿದ್ದರು.