`ಜನಾಕ್ರೋಶ ಯಾತ್ರೆ’ ನಿಮಿತ್ತ ಬೈಕ್ ರ‍್ಯಾಲಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಪಕ್ಷದ ಮುಖಂಡರ ನೇತೃತ್ವದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ದಲಿತರ ಅನುದಾನ ಲೂಟಿ, ಅಭಿವೃದ್ಧಿಹೀನ ರಾಜ್ಯ ಆಡಳಿತದ ವಿರುದ್ಧ ಮಂಗಳವಾರ ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆಯ ನಿಮಿತ್ತ ಬೆಟಗೇರಿ ವಾರ್ಡ್ ನಂ.7ರ ಸದಸ್ಯ ರಾಘವೇಂದ್ರ ಯಳವತ್ತಿ ನೇತೃತ್ವದಲ್ಲಿ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು.ರ‍್ಯಾಲಿಯಲ್ಲಿ ಶ್ರೀನಿವಾಸ ಹುಬ್ಬಳ್ಳಿ, ಚಿನ್ನಪ್ಪ ನೆಗಳೂರ, ಬಿಜೆಪಿ ಬೂತ್ ಅಧ್ಯಕ್ಷರಾದ ರವೀಂದ್ರ ಚೋಳಿನ, ಮೈಲಾರಿ ತುರಕಾಣಿ, ಕೃಷ್ಣಾ ಲಕ್ಕುಂಡಿ, ಸಿದ್ದು ಪಿಂಡಕೂರ, ರವಿ ಗಂಜಿ, ಈರಣ್ಣಾ ಹುಳ್ಳಿ, ಮಂಜುನಾಥ ಗಂಜಿ, ಸುರೇಶ ಕೊಳ್ಳಿ, ಈರಣ್ಣಾ ಬ್ಯಾಹಟ್ಟಿ, ವಿರೇಶ ಬೆಲೇರಿ, ರಾಜು ಲಕ್ಕುಂಡಿ, ಗೌರೀಶ ಬೇಲೇರಿ, ಗ್ಯಾನೋಬ ಪತಂಗಿ, ಗಣಪತಿ ಶ್ಯಾಗಾವಿ, ಈಶ್ವರ ಅಸುಂಡಿ, ವಿಠ್ಠಲ ಕಾಳಗಿ, ಬಸವರಾಜ ನಂದರಗಿ, ಬಸವರಾಜ ಹಾದಿ, ಗಣೇಶ ಪಿಂಡಕೂರ, ಸಂತೋಷ ಸಣ್ಣಕ್ಕಿ, ಕಿರಣಸಿಂಗ್ ಕಾಟೇವಾಲ್, ಜಂಬಣ್ಣ ಕಪ್ಲಿ, ಅರುಣ ಮಾಂಡ್ರೆ, ಅರ್ಜುನ್ ಸೋಳಂಗಿ, ಪರೂತ ಸೂರಟೂರ್, ಅರುಣ ಕೋಪರ್ಡೆ, ಸುನೀಲ್ ಜಮಾದಾರ, ಶಕ್ತಿಸಿಂಗ್ ರಜಪೂತ, ರಾಮಕುಮಾರ ನರಾಲ್, ನಾಗರಾಜ ಶಿಗ್ಲಿ, ರಾಘವೇಂದ್ರ ಹುಳ್ಳಿ, ವೆಂಕಟೇಶ ಹಡಗಲಿ, ಹುಚ್ಚಪ್ಪ ಭಜಂತ್ರಿ, ಸಲೀಂ ಮುಳಗುಂದ, ಸಂಜು ಕತ್ತಿಕೈ ಮುಂತಾದವರಿದ್ದರು.

Advertisement

Spread the love

LEAVE A REPLY

Please enter your comment!
Please enter your name here