ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿಯ ಕರ್ತೃ ಶ್ರೀ ಜ.ಫಕೀರೇಶ್ವರ ಜಾತ್ರೆಯ ಅಂಗವಾಗಿ ಎ. 27ರಂದು ತೇರಿನ ಗಡ್ಡಿ ಹೊರಹಾಕುವುದರ ಮೂಲಕ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ.
ಮೇ.2ರಂದು ಜ.ಫಕೀರ ಸಿದ್ದರಾಮ ಸ್ವಾಮೀಜಿಗಳ ಹೊರ ಪಯಣ ಉತ್ಸವ ಹರಿಪುರಕ್ಕೆ ದಯ ಮಾಡಿಸುವದು ಮತ್ತು ಸಾಯಂಕಾಲ 5 ಗಂಟೆಗೆ ಕಳಸಾರೋಹಣ, ಮೇ. 7 ಮತ್ತು 8ರಂದು ಲಕ್ಷ್ಮೇಶ್ವರದಲ್ಲಿ ಭಿಕ್ಷೆ, ಮೇ. 9ರಂದು ಬೆಳಿಗ್ಗೆ 11 ಗಂಟೆಗೆ ಕೋಳಿವಾಡ ದ್ಯಾಮವ್ವ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಸಂಜೆ 5 ಗಂಟೆಗೆ ಲಕ್ಷ್ಮೀ ಪೂಜೆ ನೆರವೇರುವುದು.
ಮೇ. 11ರಂದು ಹರಿಪೂರದಲ್ಲಿ ಭಿಕ್ಷೆ, ಮೇ. 12ರಂದು ಹರಿಪೂರದಿಂದ ಶಿರಹಟ್ಟಿಗೆ ಬಂದು ಮ್ಯಾಗೇರಿ ಪಾದಗಟ್ಟಿಯಿಂದ ಉತ್ಸವದ ಮುಖಾಂತರ ಶ್ರೀಮಠಕ್ಕೆ ಬಂದು ಉಚ್ಪಾಯ ಎಳೆಯುವದು, ಅಲ್ಲಿಂದ ಸದರಿಗೆ ಬಂದು ದರ್ಬಾರ ನಡೆಸುವದು, ಸಂಜೆ 5 ಗಂಟೆಗೆ ಮೆರವಣಿಗೆ ಮುಖಾಂತರ ಶೆಟ್ಟರ ಮನೆಯಿಂದ ಬಂದು ಶ್ರೀಮಠದ ರಥೋತ್ಸವಕ್ಕೆ ಚಾಲನೆ ನೀಡಲಾಗುವುದು.
ನಂತರ ಧರ್ಮಸಭೆ, ಮೇ. 13ರಂದು ಬೆಳಿಗ್ಗೆ 10ಗಂಟೆಯಿಂದ ಗುಡಾರ ಬಿನ್ನಾಯ, ಮೇಣಿಯಲ್ಲಿ ಉತ್ಸವದೊಂದಿಗೆ ಸಂಜೆ 5 ಗಂಟೆಗೆ ಕಡುಬಿನ ಕಾಳಗ, ಮೇ. 14ರಂದು ಬೆಳಿಗ್ಗೆ 11 ಗಂಟೆಗೆ ಸಂಗೀತ ಕಚೇರಿ, ಕಲಾವಿದರಿಗೆ ಸನ್ಮಾನ, ಮೇ. 17ರಂದು ಕಳಸ ಇಳಿಸುವುದು, ಮಧ್ಯಾಹ್ನ 12 ಗಂಟೆಗೆ ಜಂಗಮ ಗಣಾರಾಧನೆ ಹಾಗೂ ರಾತ್ರಿ 9 ಗಂಟೆಗೆ ಜ.ಫ. ಸಿದ್ದರಾಮ ಸ್ವಾಮೀಜಿ ಫಕೀರರ ವೇಷದಲ್ಲಿ ನಗಾರಿಖಾನೆಗೆ ದಯ ಮಾಡಿಸುವುದು, ಕುರಾನ್ ಪಠಣ, ಪೀರಾಗಳಿಗೆ ದಾನ ಕೊಡುವದು, ಮೇ. 27ರಂದು ಮುಂಜಾನೆ 11 ಗಂಟೆಗೆ ತೇರಿನ ಗಡ್ಡಿ ಒಳ ಹಾಕುವುದು, ನಂತರ ಮಹಾಪ್ರಸಾದ ಕಾರ್ಯಕ್ರಮಗಳು ನಡೆಯಲಿವೆ ಎಂದು ಟ್ರಸ್ಟ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.