ಬೆಂಗಳೂರು: ಇರಾನ್, ಇರಾಕ್, ಇಂಡೋನೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶ ಇವೆಲ್ಲವು ನಮ್ಮವು ಎಂದು ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷ ಆದ್ರೂ ಹಿಂದೂ ಎಂಬ ವ್ಯಕ್ತಿಗೆ ಅಪಮಾನ, ಅಪ್ರಚಾರ ಆಗುತ್ತಲೇ ಇದೆ ಎಂದರು.
Advertisement
ನಮ್ಮ ಭೂಮಿಯಲ್ಲೇ ನಮಗೆ ಅವಮಾನ. ಇದಕ್ಕೆ ಕಾರಣ ನಾವೇ. ನಾವೇ ದುರ್ಬಲರು, ಅಸಂಘಟಿತವಾಗಿದ್ದೇವೆ, ಹೇಡಿಗಳಾಗಿದ್ದೇವೆ. ಧೈರ್ಯ, ಸ್ಥೈರ್ಯ ಬರಬೇಕು ಎಂದರು.
ಸ್ವಾತಂತ್ರ್ಯ ಮುಂಚೆ ಬ್ರಿಟಿಷರೇ ಭಾರತ ಬಿಟ್ಟು ಹೋಗಿ ಅನ್ನೋ ಘೋಷಣೆ ಇತ್ತು. ಈಗ ಭಾರತ ಅಪಾಯದಲ್ಲಿದೆ.
ಹಿಂದೂ ಅಪಾಯದಲ್ಲಿದ್ದಾನೆ, ಹಿಂದೂ ಧರ್ಮ ಅಪಾಯದಲ್ಲಿದೆ ಅಂತ ಘೋಷಣೆಯೊಂದಿಗೆ ಜೀವಿಸಬೇಕಿದೆ. ದೇಶ, ಧರ್ಮ ಉಳಿಸಬೇಕಿದೆ. ಎಷ್ಟೋ ಧರ್ಮ ಅವಹೇಳನ, ಎಷ್ಟೋ ಭೂಮಿ ಕಳೆದುಕೊಂಡಿದ್ದೇವೆ. ಅವಲೋಕನ ಮಾಡಿಕೊಳ್ಳಬೇಕಿದೆ ಎಂದು ಮುತಾಲಿಕ್ ಬೇಸರ ವ್ಯಕ್ತಪಡಿಸಿದ್ದಾರೆ.