ವಿಜಯಸಾಕ್ಷಿ ಸುದ್ದಿ, ಗದಗ: ಹೊಳೆಇಟಗಿ ಗ್ರಾಮದ ಅಂಬಿಗ ಸಮಾಜದ ಹಾಗೂ ಗೊಜನೂರ ಮೊರಾರ್ಜಿ ದೇಸಾಯಿ ವಸತಿಯು ಶಾಲೆಯ ವಿದ್ಯಾರ್ಥಿನಿ ಸ್ಪೂರ್ತಿ ಮಾನಮ್ಮನವರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 622/625 ಅಂಕ ಗಳಿಸಿ ಗದಗ ಜಿಲ್ಲೆಗೆ ದ್ವಿತೀಯ ಸ್ಥಾನ ಮತ್ತು ರಾಜ್ಯಕ್ಕೆ ಸ್ಥಾನ ನಾಲ್ಕನೇ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾಳೆ.
ಗದಗ ಜಿಲ್ಲಾ ಅಂಬಿಗ ಸಮಾಜದ ಜಿಲ್ಲಾಧ್ಯಕ್ಷ ರಾಮಣ್ಣ ಇರಕಲ್ಲ ಹಾಗೂ ಪ್ರಧಾನ ಕಾರ್ಯದರ್ಶಿ ಸಂಗಮೇಶ ಹಾದಿಮನಿಯವರು ಸಾಧಕ ವಿದ್ಯಾರ್ಥಿನಿಯನ್ನು ಅಭಿನಂದಿಸಿ, ಸರ್ಕಾರಿ ವಸತಿಯುತ ಶಾಲೆಯಲ್ಲಿ ಅಧ್ಯಯನಗೈದು ಈ ಯಶಸ್ಸು ಸಾಧಿಸಿದ್ದು, ಸಮಾಜದ ಹಾಗೂ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಕಾಶ ಮಾನಮ್ಮನವರ, ನಿಂಗಪ್ಪ ಮಾನಮ್ಮನವರ, ಮಹಾಂತೇಶ ಮಾನಮ್ಮನವರ, ಗುರು ತಿರ್ಲಾಪೂರ, ಹರೀಶ ಬಾರಕೇರ, ಅಮಿತ ಪೂಜಾರ, ರಾಜೂ ಪೂಜಾರ, ಮಂಜುನಾಥ ಗುಡಿಸಾಗರ, ಮಹಿಳಾ ಅಧ್ಯಕ್ಷರಾದ ಸುಜಾತಾ ಗುಡಿಸಾಗರ, ರವಿ ಗುಡಿಸಾಗರ, ಚಂದ್ರಕಾಂತ ಬಾರಕೇರ ಹಾಗೂ ಹೊಳೆಇಟಗಿ ಗ್ರಾಮಸ್ಥರು ಅಭಿನಂದಿಸಿದ್ದಾರೆ.