ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದಿರುವ RCB ತಂಡಕ್ಕೆ ತಮಿಳುನಾಡಿನ ಸಿಎಂ ಎಂ ಕೆ ಸ್ಟಾಲಿನ್ ಶುಭ ಕೋರಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಖಾತೆ ಮೂಲಕ ಪೋಸ್ಟ್ ಅನ್ನು ಶೇರ್ ಮಾಡಿರುವ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಅವರು,
Advertisement
ಆರ್ಸಿಬಿ ಭಲೇ! ಭೇಷ್. ಈ ಸೀಸನ್ನಲ್ಲಿ ಎಲ್ಲವೂ ಅಚ್ಚರಿಗಳಿಂದ ತುಂಬಿತ್ತು. ಆದರೆ ರೋಮಾಂಚನದಿಂದ ಟೂರ್ನಿ ಅಂತ್ಯವಾಗಿದೆ. ಸತತ ಹೋರಾಟದಿಂದ ಕೊನೆಗೂ ಟ್ರೋಫಿಯನ್ನು ಎತ್ತಿ ಹಿಡಿದಿದ್ದೀರಿ ಎಂದು ಹೇಳಿದ್ದಾರೆ.
ಹಲವು ವರ್ಷಗಳಿಂದ ಕಾಯುತ್ತಿದ್ದ ವಿರಾಟ್ ಕೊಹ್ಲಿ ಅವರ ಕನಸು ನಿನ್ನೆ ರಾತ್ರಿ ನೆರವೇರಿದೆ. ನಿಜವಾಗಲೂ ಟ್ರೋಫಿ ನಿಮಗೆ ಸಲುತ್ತದೆ. ಕೀರಿಟ ನಿಮಗೆ.. ಕಿಂಗ್ ಕೊಹ್ಲಿ ಅವರಿಗೆ ಎಂದಿದ್ದಾರೆ. ಇದರ ಜೊತೆಗೆ ಮುಂದಿನ ಐಪಿಎಲ್ ಸೀಸನ್ನಲ್ಲಿ ಸಿಎಸ್ಕೆ ತಂಡ ಸ್ಟ್ರಾಂಗ್ ಕಮ್ಬ್ಯಾಕ್ ಮಾಡುತ್ತದೆ ಎಂದು ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.