ಬೆಂಗಳೂರು: ಸಾವಿನ ಮೇಲೆ ರಾಜಕೀಯ ಮಾಡುತ್ತಿರುವುದು ಯಾರು? ನಾಚಿಕೆ ಆಗಲ್ವಾ ಇವರಿಗೆ? ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ್ ಬೆಲ್ಲದ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಾವಿನ ಮೇಲೆ ರಾಜಕೀಯ ಮಾಡುತ್ತಿರುವುದು ಯಾರು? ನಾಚಿಕೆ ಆಗಲ್ವಾ ಇವರಿಗೆ? ನಿಮಗೆ ಮಕ್ಕಳಿಲ್ವಾ, ಮನುಷ್ಯತ್ವ ಇಲ್ವಾ? ಎಂದು ವಾಗ್ದಾಳಿ ನಡೆಸಿದರು.
Advertisement
ಚಿನ್ನಸ್ವಾಮಿ ಕಾಲ್ತುಳಿತ ಘಟನೆಗೆ ಸಿಎಂ, ಡಿಸಿಎಂ, ಗೃಹ ಸಚಿವರೇ ಕಾರಣ. ತಕ್ಷಣ ಹೊಣೆ ಹೊತ್ತು 3 ಜನ ರಾಜೀನಾಮೆ ಕೊಡಬೇಕು. ವಿಧಾನಸೌಧ ಎದುರಿನ ವೇದಿಕೆ 25-30 ಜನರಿಗೆ ಮಾತ್ರ ಸೀಮಿತವಾಗಿತ್ತು. ಆದರೆ 350 ಜನ ಬಂದಿದ್ದರು. ಸಚಿವರ ಕುಟುಂಬದವರೇ ತುಂಬಿದ್ದರು. ಘಟನೆ ಬಳಿಕ ಕಣ್ಣೀರಿನ ರಾಜಕಾರಣ ಮಾಡಿದರು. ಘಟನೆ ತಿಳಿದಿದ್ದರೂ ಡಿಸಿಎಂ ಸ್ಟೇಡಿಯಂಗೆ ಹೋಗಿ ಕಪ್ಗೆ ಮುತ್ತು ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.