ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ನರಸಾಪೂರ ಗ್ರಾಮದ ಜಗದ್ಗುರು ಮುಂಡರಗಿ ಅನ್ನದಾನೇಶ್ವರ ಶಾಖಾ ಮಠದಲ್ಲಿ ಗದಗ ಜಿಲ್ಲಾ ಪತ್ರಿಕಾ ವಿತರಕರ ಸಂಘದ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಸಮಾರಂಭ ಜರುಗಿತು.
ಕಳೆದ 30 ವರ್ಷಗಳಿಂದ ಪತ್ರಿಕಾ ವಿತರಣೆಯಲ್ಲಿ ತೊಡಗಿಕೊಂಡಿರುವ ಸಂಘದ ಹಿರಿಯರಾದ ಕಲ್ಲಯ್ಯ ಎಸ್.ಹಿರೇಮಠ ಹಾಗೂ ಗಂಗಾಧರ ಮಡ್ಡಿ ಅವರನ್ನು ಸನ್ಮಾನಿಸಲಾಯಿತು.
ಮುಂಡರಗಿ ಅನ್ನದಾನೇಶ್ವರ ಶಾಖಾ ಮಠದ ವೀರೇಶ್ವರ ಸ್ವಾಮೀಜಿ, ಬನ್ನಿಕೊಪ್ಪ ಬ್ರಹನ್ಮಠ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ, ಜಿಗೆರಿ-ವೆಂಕಾಟಾಪುರದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಸಂಘದ ರಾಜ್ಯಾಧ್ಯಕ್ಷ ಶಂಕರ್ ಕುದ್ರಿಮೋತಿ, ಜಿಲ್ಲಾ ಅಧ್ಯಕ್ಷ ವೀರಬಸಯ್ಯ ವೀರಕ್ತಮಠ ಸೇರಿದಂತೆ ಶಂಕರಗುರು ಕಂದಗಲ್ಲ, ಸಿದ್ದರಾಮೇಶ್ವರ ಮಡಿವಾಳರ, ಕಿರಣ ಮದ್ಲಿ, ಕರಿಯಪ್ಪ ಗಾಣಿಗೇರ, ಮಂಜುನಾಥ ಕಬನೂರ ಹಾಗೂ ಸಂಘದ ಸರ್ವ ಪದಾಧಿಕಾರಿಗಳು ಹಾಜರಿದ್ದರು.