
ಗದಗ: ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಕಾರ ಹುಣ್ಣಿಮೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕರಿ ಹರಿಯಲು ಒಟ್ಟು ಐದು ಹೋರಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದವು. ಕರಿ ಹರಿದ ಹೋರಿಗಳಿಗೆ ವಿಶೇಷ ಪೂಜೆ ಮಾಡಿ ಮೆರವಣೆಗೆ ಮಾಡಿ ಗ್ರಾಮದ ಎಲ್ಲಾ ರೈತರು ಸಂಭ್ರಮದಿಂದ ಕಾರ ಹುಣ್ಣಿಮೆಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ, ಶರಣಪ್ಪ ಜೋಗಿನ, ಫಕೀರಪ್ಪ ಗುಡ್ಲಾನೂರ, ಮಲ್ಲಿಕಾರ್ಜುನ ಇದ್ಲಿ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
Advertisement