ಆರ್ ಸಿಬಿ ಕಾಲ್ತುಳಿತಕ್ಕೆ ಕಾಂಗ್ರೆಸ್ ನಾಯಕರ ಒಳಜಗಳ ಕಾರಣ: ಸಚಿವ ಜೋಶಿ ಆರೋಪ!

0
Spread the love

ಕಲಬುರಗಿ:- ಕಳೆದ ಜೂನ್ 4 ರಂದು ಸಂಭವಿಸಿದ್ದ ಆರ್ ಸಿಬಿ ಕಾಲ್ತುಳಿತಕ್ಕೆ ರಾಜ್ಯ ಕಾಂಗ್ರೆಸ್ ನಾಯಕರ ಒಳಜಗಳ ಕಾರಣ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಜೋಶಿ, ಇಂದು ರಾಜ್ಯದಲ್ಲಿ‌ ಕಾನೂನು ಸುವ್ಯವಸ್ಥೆ ಹಾಗೂ ಕಾಂಗ್ರೆಸ್ ನಾಯಕರ ಒಳಜಗಳದಿಂದ ಗೊಂದಲ ಸೃಷ್ಟಿಯಾಗಿದೆ. ರಾಜ್ಯ ನಾಯಕರ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲ. ಅದರ ಪರಿಣಾಮ ಆರ್ ಸಿಬಿ ಕಾಲ್ತುಳಿತ ಪ್ರಕರಣ ನಡೆದಿದೆ.

Advertisement

ಒಂದು‌ ಕಡೆ ದೇಶ ಮುಂದುವರೆದ್ರೆ ರಾಜ್ಯ ಹಿಂದುಳಿಯುತ್ತಿದೆ. ಭ್ರಷ್ಟಾಚಾರ ಇವರ ಮನೆ ಮಾತಾಗಿದೆ. ವರ್ಗಾವಣೆ ದಂಧೆ ಸಹ ನಡೆದಿದೆ. ಇದು ೬೦% ಸರ್ಕಾರ ಅಂತಾ ಗುತ್ತಿಗೆದಾರರು ಹೇಳಿದ್ದಾರೆ. ಮನಬಂದಂತೆ ಆಡಳಿತ ನಡೆಸಿ ದೊಡ್ಡ ಪ್ರಮಾಣದಲ್ಲಿ ಸಾಲ ಮಾಡುತ್ತಿದ್ದಾರೆ. ಪರಸ್ಪರ ಸಚಿವರ ನಡುವೆ ಹೊಂದಾಣಿಕೆ ಇಲ್ಲ
ಹೀಗಾಗಿ ಆರ್ಥಿಕ ಪರಿಸ್ಥಿತಿ ಸಹ ಹಾಳಾಗಿದೆ. ದೇಶದಲ್ಲಿ‌ ಮೊದಲ ಗ್ಯಾರಂಟಿ ಅಂತಾ ಹೇಳ್ತಾರೆ. ಈಗ ಅದನ್ನು ಸ್ಯಾಲರಿ ಅಂತಾ ಕೆಲವರು ಹೇಳ್ತಾರೆ. ಇನ್ನೂ ಕೆಲವರು ತಿಂಗಳ ಹಣ ಹಾಕ್ತಿವಿ ಅಂತಾ ಹೇಳುತ್ತಿದ್ದಾರೆ.
ಈ ರಾಜ್ಯಕ್ಕೆ ಯಾವ ಅಭಿವೃದ್ಧಿಯ ಗುರಿ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here