ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಜನತಾ ಬಜಾರದ ಪೂಜ್ಯ ಶ್ರೀ ಕಲ್ಲಯ್ಯಜ್ಜ ಯುವಕ ಮಂಡಳದ ವತಿಯಿಂದ ಪರಮಪೂಜ್ಯ ಗಾನಯೋಗಿ ಶಿವಯೋಗಿ ಪಂ. ಶ್ರೀ ಪಂಚಾಕ್ಷರಿ ಗವಾಯಿಗಳರವರ 81ನೇ ಹಾಗೂ ಪಂಡಿತ ಶ್ರೀ ಪುಟ್ಟರಾಜ ಗವಾಯಿಗಳರವರ 15ನೇ ಪುಣ್ಯಸ್ಮರಣೋತ್ಸವದ ನಿಮಿತ್ತ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.
ಮುಖ್ಯ ಅತಿಥಿಗಳಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿ.ಜಿ. ಮೇರವಾಡೆ, ಶಹರ ಪೊಲೀಸ್ ಠಾಣೆ ಸಿಪಿಐ ಡಿ.ಬಿ. ಪಾಟೀಲ, ಎಸ್.ಎನ್. ಬಳ್ಳಾರಿ, ಮಾರುತಿ ಸೋಳಂಕಿ, ಮಹಮ್ಮದಅಲಿ ಅತ್ತಾರ, ಚಂದ್ರು ಮೇಲಿನಮನಿ, ಉಮರ ಫಾರೂಕ ಹುಬ್ಬಳ್ಳಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಿತಿಯ ಅಧ್ಯಕ್ಷ ರಾಜು ಡಿ.ರೋಣ, ಉಪಾಧ್ಯಕ್ಷ ರಾಮಣ್ಣ ಎನ್.ಗುರುಜಾಲಕರ, ಕಾರ್ಯದರ್ಶಿ ರಾಘವೇಂದ್ರ ವಿ.ಖೋಡೆ, ಸಹ-ಕಾರ್ಯದರ್ಶಿ ಚನ್ನಪ್ಪ ಗ.ಸಂಗಮ, ಖಜಾಂಚಿ ಗಣೇಶ ಕೆ.ಪಾಟೀಲ, ಸಮಿತಿಯ ಸದಸ್ಯರಾದ ಈರಣ್ಣ ತಿಪ್ಪಶೆಟ್ಟಿ, ಕಾಶೀನಾಥ ಎನ್.ಕಬಾಡಿ, ನಿಂಗಪ್ಪ ಮಾಗಡಿ, ಬುಡೆಲಿ ಅತ್ತಾರ, ರೇವಣಪ್ಪ ರಾಜೂರ, ರಾಜೇಸಾಬ ಸಯ್ಯದ, ಮಂಜುನಾಥ ಕಾಟವಾ, ರಾಜೀವ ರೋಣದ, ರಾಮಣ್ಣ, ಗಣೇಶ, ರಾಘವೇಂದ್ರ, ಈರಣ್ಣ, ಬುಡೆಲಿ ಅತ್ತಾರ, ಕಾಶೀನಾಥ ಕಬಾಡಿ, ಚನ್ನಪ್ಪ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಭಾಷಾಸಾಬ ಮಲ್ಲಸಮುದ್ರ ನಿರೂಪಿಸಿದರು. ರಾಮಣ್ಣ ಗುರುಜಾಲಕರ ವಂದಿಸಿದರು.