ವಿಜಯಸಾಕ್ಷಿ ಸುದ್ದಿ, ಗದಗ
ಎಂತೆಂತಹ ಜನ ಇರ್ತಾರೆ ಅನ್ನೋದು ಈ ಲಾಕ್ ಡೌನ್ ಸಂದರ್ಭದಲ್ಲಿ ಗೊತ್ತಾಗುತ್ತಿದೆ. ಪೊಲೀಸರ ಜೊತೆಗೆ ನಡೆಯುವ ಘಟನೆಗಳಂತೂ ಸ್ವಾರಸ್ಯಕರವಾಗಿರುತ್ತವೆ.
ಅಂತಹ ಘಟನೆಯೊಂದು ಗದಗನಲ್ಲಿ ಟ್ರಾಫಿಕ್ ಪೊಲೀಸರೊಂದಿಗೆ ನಡೆದಿದೆ.
ಟಾಂಗಾ ಕೂಟ ಸರ್ಕಲ್ ಬಳಿ
ಯುವಕನೊಬ್ಬ ಮಾಸ್ಕ್ ಹಾಕದೆ ಯರ್ರಾಬಿರ್ರಿ ಬೈಕ್ ಓಡಿಸಿಕೊಂಡು ಬರುತ್ತಿದ್ದ. ಅದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ತಡೆಯಲು ಮುಂದಾಗಿದ್ದಾರೆ. ಆದರೆ ಬೈಕ್ ನಿಲ್ಲಿಸದೆ ಮತ್ತಷ್ಟು ವೇಗವಾಗಿ ಓಡಿಸಿದ್ದಾನೆ. ಮುಂದೆ ಬಸವೇಶ್ವರ ಸರ್ಕಲ್ ಬಳಿಯೂ ಪೊಲೀಸರು ಕೈ ಮಾಡಿದ್ದಾರೆ. ಅಲ್ಲಿಯೂ ಪಾರಾಗಿ ಬಂದಿದ್ದಾನೆ. ಮುಂದೆ ನಿಯಂತ್ರಣ ಕಳೆದುಕೊಂಡ ಬೈಕ್ ಸವಾರ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು ಬಿದ್ದಿದ್ದಾನೆ. ಅಷ್ಟರೊಳಗೆ ಪೊಲೀಸರು ಅಲ್ಲಿಗೆ ಬಂದು ವಿಚಾರಣೆ ನಡೆಸಿದ್ದಾರೆ.
ಯುವಕ ಪಾನಮತ್ತನಾಗಿದ್ದ ಎನ್ನಲಾಗಿದೆ. ಅಣ್ಣಪ್ಪ ಶೆರೆಗಾರ ಎಂಬ ಹೆಸರಿನ ಆತ ಜಿಮ್ಸ್ ಹಾಸ್ಟೆಲ್ ಒಂದರಲ್ಲಿ ಅಡುಗೆ ಸಿಬ್ಬಂದಿಯಂತೆ. ಅಲ್ಲಿನ ವಿದ್ಯಾರ್ಥಿಗಳಿಗೆ, ಕೆಲವೊಮ್ಮೆ ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಊಟ ಕೊಡ್ತಾನಂತೆ. ನೀವು ಬೈಕ್ ಸೀಜ್ ಮಾಡಿದರೆ ಒಂದೇ ಗಂಟೆಯಲ್ಲಿ ಬಿಡಿಸಕ್ಕೊಂಡು ಹೋಗ್ತೀನಿ. ನೀವು ಯಾರಿಗೆ ಹೇಳ್ತೀರಿ... ನಿಮ್ಮ ಸಾಹೇಬ್ರಗೆ ಹೇಳ್ತೀರಾ ಹೇಳಿ...' ಅಂತ ಆವಾಜ್ ಹಾಕಿದ. ಆಗ ಪೊಲೀಸರು,
ಆಯಿತು, ನೀನು ಮಾಸ್ಕ್ ಯಾಕ ಹಾಕಿಲ್ಲ?’ ಅಂದ್ರೆ, ಅದಕ್ಕೂ ವಾದ ಮಾಡಿದ. `ನಾ ಮಾಸ್ಕ್ ಹಾಕ್ಕೊಳ್ಳಂಗಿಲ್ಲ, ನನಗೂ ಪಾಸಿಟಿವ್ ಬಂದಿದೆ. ಎರಡು ದಿನ ಆಯಿತು. ಏನ್ ಮಾಡಬೇಕು?’ ಅಂದ. ಪಾಸಿಟಿವ್ ಅಂದಾಕ್ಷಣ ಬೆಚ್ಚಿ ಬಿದ್ದ ಪೊಲೀಸರು ಆತನ ಬೈಕ್ ಸೀಜ್ ಮಾಡಿದರು.