ನಾನಂತೂ ಕೆಪಿಸಿಸಿ ಅಧ್ಯಕ್ಷ ಆಕಾಂಕ್ಷಿ, ಹೈಕಮಾಂಡ್ ನಿರ್ಧಾರಕ್ಕೆ ಕಾಯಬೇಕು ಅಷ್ಟೆ: ಸತೀಶ್ ಜಾರಕಿಹೊಳಿ

0
Spread the love

ಬೆಳಗಾವಿ: ನಾನಂತೂ ಕೆಪಿಸಿಸಿ ಅಧ್ಯಕ್ಷ  ಆಕಾಂಕ್ಷಿ ಇದ್ದೇನೆ. ಹೈಕಮಾಂಡ್ ನಿರ್ಧಾರಕ್ಕೆ ಕಾಯಬೇಕು ಅಷ್ಟೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನಂತೂ ಕೆಪಿಸಿಸಿ ಅಧ್ಯಕ್ಷ  ಆಕಾಂಕ್ಷಿ ಇದ್ದೇನೆ.

Advertisement

ಹೈಕಮಾಂಡ್ ಯಾವಾಗ ಮಾಡುತ್ತಾರೆ ಕಾದು ನೋಡಬೇಕು. ನಾನು ಯಾವುದೇ ಒತ್ತಡ ಹಾಕುವುದಿಲ್ಲ ಎಂದು ಹೇಳಿದರು. ಇನ್ನೂ ರಾಜೀವ್ ಗಾಂಧಿ ವಸತಿ ಯೋಜನೆಯ ಹಗರಣದ ಕುರಿತು ಶಾಸಕ ಬಿ. ಆರ್. ಪಾಟೀಲ್ ಆಡಿಯೋ ವೈರಲ್ ವಿಚಾರ ಮಾತನಾಡಿ,

ಶಾಸಕರ ಹೇಳಿಕೆಯನ್ನು ತನಿಖೆ ಮಾಡಿಸಬೇಕು, ಮೊದಲು ತನಿಖೆ ಆಗಬೇಕು, ಆಮೇಲೆ ವಿಚಾರ ಮಾಡೋಣ. ತನಿಖೆಯಿಂದ ಸತ್ಯಾಂಶ ಹೊರ ಬರುತ್ತೆ. ನಾನಾಗಿ ಯಾವುದೇ ತನಿಖೆಗೆ ಒತ್ತಾಯ ಮಾಡಲ್ಲ. ಇಲಾಖೆ ತಾನಾಗಿಯೇ ತನಿಖೆ ನಡೆಸಲಿ. ಅದು ಅವರ ಕರ್ತವ್ಯ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here