ಹಣ ಪಡೆದು ವಂಚಿಸಿದ ಆರೋಪ: ನಿರ್ದೇಶಕ ನಂದ ಕಿಶೋರ್‌ ಹೇಳಿದ್ದೇನು?

0
Spread the love

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ನಂದ ಕಿಶೋರ್‌ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಶಬರೀಶ್ಶೆಟ್ಟಿ ಎಂಬುವವರು ನಂದ ಕಿಶೋರ್ಮೇಲೆ ಹಣ ವಂಚನೆ ಆರೋಪ ಮಾಡಿದ್ದು ಬಗ್ಗೆ ವಾಣಿಜ್ಯ ಮಂಡಳಿಗೆ ದೂರು ನೀಡುವುದಾಗಿ ಹೇಳಿದ್ದಾರೆ. ಇದೀಗ ಬಗ್ಗೆ ನಂದ ಕಿಶೋರ್ಪ್ರತಿಕ್ರಿಯಿಸಿದ್ದಾರೆ.

Advertisement

ತಮ್ಮ ಮೇಲೆ ಬಂದಿರುವ ಆರೋಪದ ಬಗ್ಗೆ ಮಾತನಾಡಿರುವ ನಂದ ಕಿಶೋರ್‌, ಈಗ ನಾನು ಕೆಲಸದ ಮೇಲೆ ಇದ್ದೇನೆ. 15 ದಿನದ ಬಳಿಕ ಬೆಂಗಳೂರಿಗೆ ಬರುತ್ತೇನೆ. ಬಂದ ಕೂಡಲೇ ಒಂದು ಸುದ್ದಿಗೋಷ್ಠಿ ಮಾಡುತ್ತೇನೆ. ಆಗ ಎಲ್ಲಾದಕ್ಕೂ ಉತ್ತರ ಕೊಡುತ್ತೇನೆ. ಇವತ್ತು ನಾನು ಮುಖಾಮುಖಿ ಇಲ್ಲದೇ ಏನೋ ಮಾತಾಡಿದ್ರೂ ತಪ್ಪಾಗುತ್ತೇ. ಇದಕ್ಕೆ ಎಲ್ಲಾ ಉತ್ತರವನ್ನು ಕೊಟ್ಟೇ ಕೊಡ್ತೀನಿ ಎಂದಿದ್ದಾರೆ.

ಏನಿದು ಆರೋಪ?

ಕಿಚ್ಚ ಸುದೀಪ್ ಅವರ ಅಭಿಮಾನಿ ಆಗಿರುವ ಶಬರೀಶ್ ಶೆಟ್ಟಿ ಅವರಿಗೆ ನಿರ್ದೇಶಕ ನಂದ ಕಿಶೋರ್ ಒಂಬತ್ತು ವರ್ಷಗಳ ಹಿಂದೆ ಜಿಮ್ ಒಂದರಲ್ಲಿ ಪರಿಚಯವಾದರಂತೆ. ಈ ವೇಳೆ ಸಿಸಿಎಲ್ ​​ನಲ್ಲಿ ಆಡಿಸುವುದಾಗಿ ಭರವಸೆ ನೀಡಿ ಶಬರೀಶ್ ಅವರಿಂದ 22 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದರಂತೆ. ಆದರೆ ಆ ಬಳಿಕ ಸಿಸಿಎಲ್‌ ನಲ್ಲಿ ಅವಕಾಶ ನೀಡದೆ ವಂಚಿಸಿದ್ದಾರೆ. ಜೊತೆಗೆ ಹಣ ಕೇಳಿದಾಗೆಲ್ಲಾ ಸುದೀಪ್‌ ಹೆಸರು ಹೇಳಿ ಯಾಮಾರಿಸುತ್ತಿದ್ದಾರೆ ಎಂದು ಶಬರೀಶ್‌ ಹೇಳಿದ್ದಾರೆ.

‘ನಾನು ಚಿನ್ನ ಅಡವಿಟ್ಟು ಹಣ ಕೊಟ್ಟಿದ್ದೆ’. ತಮ್ಮ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು. ಆದರೆ ಈಗ ಹಣವೂ ನೀಡುತ್ತಿಲ್ಲ. ಸಿನಿಮಾದಲ್ಲಿ ಅವಕಾಶವೂ ನೀಡಿಲ್ಲ. ಜೊತೆಗೆ ಸಿಸಿಎಲ್‌ ನಲ್ಲೂ ಆಡಿಸಿಲ್ಲ. ಹಣ ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಬರೀಶ್‌ ಅಳಲು ತೋಡಿಕೊಂಡಿದ್ದಾರೆ.

‘ನಾನು 200 ಗ್ರಾಂ ಚಿನ್ನ ಅಡವಿಟ್ಟು ಅವರಿಗೆ ಹಣ ಕೊಟ್ಟಿದ್ದೆ, ಆ ಚಿನ್ನದ ಲೋನ್ ಕಟ್ಟಿ ಎಂದೆ ಅದನ್ನು ಕಟ್ಟಲಿಲ್ಲ. ನಾನು ಬಡ್ಡಿ ಕಟ್ಟಿದೆ. ಬಡ್ಡಿಯ ಮೇಲೆ ಬಡ್ಡಿ ಬೆಳೆದು ಆ ಚಿನ್ನವನ್ನು ಹರಾಜು ಹಾಕಲಾಯ್ತು. ನನ್ನ ಬಳಿ ಎಲ್ಲದಕ್ಕೂ ದಾಖಲೆ ಇದೆ. ನಾನು ಈ ವಿಚಾರವನ್ನು ಸುದೀಪ್ ಸರ್ ಗಮನಕ್ಕೆ ತರಲು ಪ್ರಯತ್ನ ಪಟ್ಟಾಗ ‌ನನ್ನ ತಡೆಯಲಾಯ್ತು. ಈ ವಿಷಯವನ್ನು ಶಿವಣ್ಣ, ಸುದೀಪ್ ಸರ್ ಗಮನಕ್ಕೆ ತರುತ್ತೇನೆ. ಫಿಲ್ಮ್ ಚೇಂಬರ್​​ಗೆ ದೂರು ಕೊಡ್ತಿನಿ’ ಎಂದು ಶಬರೀಶ್‌ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here