ಬೆಂಗಳೂರು: ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಮಾತ್ರ ತಲೆಕೆಡಿಸಿಕೊಳ್ಳದೆ ನಿದ್ರಾದೇವಿಯ ವಶದಲ್ಲಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ.
Advertisement
ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆಯೆಂದು ಕಾಂಗ್ರೆಸ್ ಶಾಸಕ ಬಿಅರ್ ಪಾಟೀಲ್ ಮಾಡಿರುವ ಅರೋಪ ಸಿದ್ದರಾಮಯ್ಯ ಸರ್ಕಾರವನ್ನು ಭಾರೀ ಇಕ್ಕಟ್ಟಿಗೆ ಸಿಲುಕಿಸಿದೆ. ಈ ಬಗ್ಗೆ ಮಾತನಾಡಿದ ಅಶೋಕ್, ಸಿದ್ದರಾಮಯ್ಯ ಯಾವ ಅರೋಪದ ಬಗ್ಗೆಯೂ ತಲೆಕೆಡಿಸಿಕೊಳ್ಳುತ್ತಿಲ್ಲ, ಅವರು ನಿದ್ರಾದೇವಿಯ ವಶದಲ್ಲಿದ್ದಾರೆ.
ವಸತಿ ಇಲಾಖೆಯಲ್ಲಿ ತಿಮಿಂಗಿಲಗಳು ಸೇರಿಕೊಂಡಿವೆ, ಕಾಂಗ್ರೆಸ್ ಶಾಸಕರು ಬಾಯ್ಬಿಟ್ರೆ ಈ ಸರ್ಕಾರ ಒಂದು ದಿನವೂ ಉಳಿಯಲ್ಲ, ಯಾವುದೇ ಅವ್ಯವಹಾರ ನಡೆದಿಲ್ಲವಾದರೆ ಬಿಅರ್ ಪಾಟೀಲ್ ಮತ್ತು ಹೆಚ್ಕೆ ಪಾಟೀಲ್ ಮಾಡಿರುವ ಅರೋಪಗಳನ್ನು ಸರ್ಕಾರ ತನಿಖೆಗೆ ಒಪ್ಪಿಸಲಿ ಎಂದು ಅಶೋಕ ಹೇಳಿದರು.