ನವದೆಹಲಿ: 2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಸರ್ಕಾರವು ರೈತರಿಗೆ ವ್ಯವಸಾಯಕ್ಕೆ ಸಹಾಯವಾಗಿ ವರ್ಷಕ್ಕೆ 6,000 ರೂನಷ್ಟು ಹಣ ನೀಡುತ್ತದೆ. ಈ 6,000 ರೂ ಹಣವನ್ನು ವರ್ಷದಲ್ಲಿ ಮೂರು ಕಂತುಗಳಲ್ಲಿ ನೀಡುತ್ತದೆ.
ಪ್ರತೀ ನಾಲ್ಕು ತಿಂಗಳಿಗೊಮ್ಮೆ 2,000 ರೂ ಹಾಕುತ್ತದೆ. ಏಪ್ರಿಲ್ನಿಂದ ಜುಲೈ, ಆಗಸ್ಟ್ನಿಂದ ನವೆಂಬರ್, ಡಿಸೆಂಬರ್ನಿಂದ ಮಾರ್ಚ್ ಹೀಗೆ ಮೂರು ಬಾರಿ ಸರ್ಕಾರದಿಂದ ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಆಗುತ್ತದೆ.
ಅದರಂತೆ ಈ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ 19 ಕಂತುಗಳನ್ನು ವಿತರಿಸಲಾಗಿದೆ. ರೈತರು ಈಗ 20ನೇ ಕಂತಿಗಾಗಿ ಕಾಯುತ್ತಿದ್ದಾರೆ. ಫೆಬ್ರವರಿಯಿಂದ ಜೂನ್ ವರೆಗೆ 4 ತಿಂಗಳು. ಇದರಿಂದಾಗಿ, 20ನೇ ಕಂತು ಜೂನ್ನಲ್ಲಿ ಬರಬಹುದು ಎಂದು ಹಲವಾರು ಮಾಧ್ಯಮ ವರದಿಗಳು ಸೂಚಿಸಿವೆ.
ಹೌದು ಪಿಎಂ ಕಿಸಾನ್ ಯೋಜನೆಯ ಕಂತುಗಳನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ ಬಿಡುಗಡೆ ಮಾಡಲಾಗುತ್ತದೆ. ಈ ವರೆಗೆ ಈ ಯೋಜನೆಯಡಿ 19 ಕಂತುಗಳನ್ನು ಬಿಡುಗಡೆ ಮಾಡಲಾಗಿದೆ. ಕೊನೆಯ ಕಂತನ್ನು 2025ರ ಫೇಬ್ರವರಿಯಲ್ಲಿ ಬಿಡುಗಡೆ ಮಾಡಲಾಗಿತ್ತು.
ಹೀಗಾಗಿ 20ನೇ ಕಂತನ್ನು 2025ರ ಜೂನ್ ಅಂತ್ಯದ ವೇಳೆಗೆ ಜಮಾ ಮಾಡುವ ಸಾಧ್ಯತೆಯಿದೆ. ಈ ಬಗ್ಗೆ ರೈತರಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಆದರೆ, ಈ ಬಾರಿ ಕಂತು ಬಿಡುಗಡೆಗೆ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಇ-ಕೈವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುದು ಕಡ್ಡಾಯವಾಗಿದೆ.