ಎಚ್.ಕೆ. ಪಾಟೀಲ ಸೇವಾ ತಂಡದಿಂದ ಕಣ್ಣಿನ ತಪಾಸಣಾ ಶಿಬಿರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಎಚ್.ಕೆ. ಪಾಟೀಲ ಸೇವಾ ತಂಡದಿಂದ ವಾರ್ಡ್ ನಂ. 33ರ ಡಾ. ಜಾಕಿರ್ ಹುಸೇನ್ ಕಾಲೋನಿಯಲ್ಲಿರುವ ಶಾದಿಮಹಲ್‌ನಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲರ ಆದೇಶದಂತೆ ಕಣ್ಣಿನ ತಪಾಸಣಾ ಶಿಬಿರವನ್ನು ನಡೆಸಲಾಯಿತು.

Advertisement

ಡಾ. ನಾಗನೂರ್, ಡಾ. ವೇಮನ್ ಸಾಹುಕಾರ್ ಹಾಗೂ ಯುವ ನಾಯಕರಾದ ಕೆ.ಎಚ್. ಪಾಟೀಲರ ನೇತೃತ್ವದಲ್ಲಿ ನೂರಾರು ಜನರು ತಮ್ಮ ಕಣ್ಣಿನ ತಪಾಸಾಣೆ ಮಾಡಿಸಿಕೊಂಡರು.

ಈ ಸಂರ್ಭದಲ್ಲಿ ಓಣಿಯ ಹಿರಿಯರಾದ ಜಾಕಿರ್ ಮುಜಾವರ, ಇಸ್ಮಾಯಿಲ್ ಬಿಜಾಪುರ, ಖಾಲಿದ್ ಕೊಪ್ಪಳ, ನೂರ್ ಅಬ್ಬುನವರ, ಜಮೀರ್ ಮಟ್ಟಿ, ಇಸ್ಮಾಯಿಲ್ ರಾಣಿಬೆನ್ನೂರ, ಅಮೀನ ದೊಡ್ಡಮನಿ ಉಪಸ್ಥಿತರಿದ್ದರು.

ಸಚಿವ ಎಚ್.ಕೆ. ಪಾಟೀಲ, ಡಿ.ಆರ್ ಪಾಟೀಲ, ಯುವ ನಾಯಕರಾದ ಕೆ.ಎಚ್. ಪಾಟೀಲರಿಗೆ ಫಲಾನುಭವಿಗಳು ಎಲ್ಲರೂ ಸೇರಿ ಧನ್ಯವಾದಗಳು ಅರ್ಪಿಸಿದರು. ಸಹಕಾರ ನೀಡಿದ ಎಲ್ಲರಿಗೂ ಟಾಸ್ಕ್ ಫೋರ್ಸ್ ಸಮಿತಿಯ ಮುಖ್ಯಸ್ಥ ಎಮ್.ಸಿ. ಶೇಖ ಧನ್ಯವಾದ ತಿಳಿಸಿದರು.


Spread the love

LEAVE A REPLY

Please enter your comment!
Please enter your name here