ಯಡಿಯೂರಪ್ಪ ಬೇಕು ಅಂತಾರೆ – ಆದರೆ ಎಲ್ಲರೂ ಸೂಟು, ಬೂಟು ಹೊಲಿಸಿಕೊಂಡಿದ್ದಾರೆ!

0
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

Advertisement

ಸಿಎಂ ಯಡಿಯೂರಪ್ಪ ಅವರದ್ದು ಯಾರಿಗೂ ಬಗ್ಗುವ ವ್ಯಕ್ತಿ ಅಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳಲ್ಲಿ ಹಲವಾರು ತಂತ್ರಗಳು ಇರುತ್ತವೆ. ಇದರೊಂದಿಗೆ ರಾಜಕಾರಣದಲ್ಲಿ ಹೇಳುವುದೊಂದು, ಮಾಡುವುದೊಂದು ಎಂಬ ನೀತಿ ಅನುಸರಿಸುತ್ತಿರುತ್ತಾರೆ. ರಾಜಕಾರಣದಲ್ಲಿ ಯಡಿಯೂರಪ್ಪ ತಂತ್ರ ಬೇರೆ. ಇರುವುದರಲ್ಲಿ ಗಟ್ಟಿ ಮನುಷ್ಯ ಎಂದು ಹೇಳಿದ್ದಾರೆ.

ಯಡಿಯೂರಪ್ಪ ನಾಯಕತ್ವದಲ್ಲಿ 104 ಸೀಟ್ ಬಂದಿವೆ. ಅವರ ನಾಯಕತ್ವದಡಿಯಲ್ಲಿಯೇ ನಮ್ಮ ಸ್ನೇಹಿತರು ಕೂಡ ಹೋಗಿದ್ದಾರೆ. ಈಗ ಸುಮ್ಮನೆ ಅವರನ್ನು ತಗೆದು ಹಾಕುವ ಮಾತು ಕೇಳಿ ಬರುತ್ತಿದೆ. ಆದರೆ, ಇದು ಅವರ ಪಕ್ಷಕ್ಕೆ ಸಂಬಂಧಿಸಿದ ವಿಚಾರ. ಆದರೆ, ಗಟ್ಟಿ ಮನುಷ್ಯನ ಮುಂದೆ ಈ ತಂತ್ರ ಸುಲಭವಾಗಿ ಜಗ್ಗಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಂದೆ ಎಲ್ಲರೂ ಯಡಿಯೂರಪ್ಪ ಬೇಕು ಅಂತಾರೆ. ಹಿಂದೆ ಎಲ್ಲರೂ ಸೂಟು – ಬೂಟು ಹೊಲಿಸಿಕೊಂಡು ಸಿದ್ಧರಾಗಿದ್ದಾರೆ.. ನನ್ನಂತಹ ವ್ಯಕ್ತಿಯಾಗಿದ್ದರೆ, ನಮ್ಮ ಪಕ್ಷ ಆಗಿದ್ದರೆ ಇಂತಹ ವ್ಯಕ್ತಿಗಳನ್ನು ಇರುವುದಕ್ಕೆ ಬಿಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಅಲ್ಲದೇ, ಯಡಿಯೂರಪ್ಪ ತಂತ್ರವನ್ನು ಮೂರು ರೀತಿಯಲ್ಲಿ ವಿಶ್ಲೇಷಣೆ ಮಾಡಬಹುದು. ನನ್ನನ್ನ ಮುಟ್ಟಿ ನೋಡಿ ಎನ್ನಬಹುದು. ಪಕ್ಷದ ಶಿಸ್ತಿನ ಸಿಪಾಯಿ ಎನ್ನಬಹುದು. ನೀವೆ ಎಲ್ಲ ವಿಶ್ಲೇಷಣೆ ಮಾಡಿ ಎಂದಿರಬಹುದು ಎಂದು ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here