ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಕಳೆದ 2 ದಿನಗಳಿಂದ ಶಿರಹಟ್ಟಿಯ ತಹಸೀಲ್ದಾರ ಕಚೇರಿ ಎದುರುಗಡೆ ನಡೆಯುತ್ತಿರುವ ಧರಣಿ 3ನೇ ದಿನವೂ ಸಹ ಮುಂದುವರೆದಿದೆ. ಬುಧವಾರ ದಲಿತ ಮಿತ್ರ ಮಂಡಳಿಯ ಪದಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ ದೊಡ್ಡಮನಿ, ಪ್ರಶಾಂತ ಕನ್ಯಾಳ, ಸೋಮಪ್ಪ ಲಮಾಣಿ, ಪರಶುರಾಮ ಡೊಂಕಬಳ್ಳಿ, ಗಂಗವ್ವ ಲಮಾಣಿ, ಗೀತಾ ಲಮಾಣಿ, ಶ್ವೇತಾ ಲಮಾಣಿ, ಸತೀಶ ಕುಂಬಾರ, ವಿಶಾಲ ಗೋಕಾವಿ, ಕಿರಣಸ್ವಾಮಿ ಹಿರೇಮಠ, ಮಂಜುನಾಥ ವಡ್ಡರ, ಆನಂದ ಹುಡೇದ, ರವಿ ಬಂಡಿವಡ್ಡರ, ಪ್ರಕಾಶ ಕುಡಲಿಂಗಣ್ಣವರ, ಬೂದೇಶ ಹಡಪದ, ಬಸವರಾಜ ಬಜಂತ್ರಿ, ಬಸವರಾಜ ಹೊನ್ನಪ್ಪನವರ, ನವೀನ ಅರಗಂಜಿ, ಈರಪ್ಪ ಚಕ್ರಸಾಲಿ ಮುಂತಾದವರಿದ್ದರು.



