ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ಗೋವನಕೊಪ್ಪ ಶಾಲೆಯಲ್ಲಿ ಕೋಗನೂರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಪ್ರೀತಮ್ ಕಬ್ಬೇರಳ್ಳಿ ಡೊಳ್ಳು ಬಾರಿಸುವುದರ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷ ಸುರೇಶ ತಳ್ಳಳ್ಳಿ ಮಾತನಾಡಿ, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಕೋಗನೂರ ಸಿಆರ್ಪಿ ಸತೀಶ ಪಶುಪತಿಹಾಳ, ಶಿರಹಟ್ಟಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಸವರಾಜ ಯರಗುಪ್ಪಿ, ಅತಿಥಿಗಳಾದ ಭೀಮಣ್ಣ ಕಬ್ಬೇರಳ್ಳಿ, ಜಗದೀಶ ತಳ್ಳಳ್ಳಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕೋಗನೂರ ಗ್ರಾ.ಪಂ ಉಪಾಧ್ಯಕ್ಷೆ ಕಸ್ತೂರೆವ್ವ ತಳ್ಳಳ್ಳಿ, ಸದಸ್ಯರಾದ ಅಜ್ಜಪ್ಪ ಭಜಂತ್ರಿ, ಶಿಕ್ಷಣಪ್ರೇಮಿ ಬಸವರಾಜ ಇಮಡಿ, ಸಿಆರ್ಪಿಗಳಾದ ತಿರಕಪ್ಪ ಪೂಜಾರ, ಆರ್ ಮಾಂತೇಶ ಬನ್ನಿಕೊಪ್ಪ, ಸಿ.ವ್ಹಿ, ವಡಕಣ್ಣವರ ಹಿರಿಯ ಶಿಕ್ಷಕರಾದ ಎಮ್.ಬಿ. ಹಾವೇರಿ, ಎಸ್.ಎಫ್. ಮಠದ, ಎನ್.ಕೆ. ಕಲಾಲ, ಜೆ.ಎಸ್. ಯರಗುದ್ರಿ, ಆರ್.ಎಂ. ಕಮ್ಮಾರ, ಆರ್.ಟಿ. ಶಿವಪ್ಪಯ್ಯನಮಠ, ಬಸವರಾಜ ಮಾನೇಗಾರ, ಎಸ್.ಬಿ. ಹೀರೆಮಠ, ಹಾಲೇಶ ಜಕ್ಕಲಿ, ವಿ.ಎಂ. ಮಲ್ಲಪ್ಪನವರ ಮುಂತಾದವರಿದ್ದರು.
ಶಾಲೆಯ ಪ್ರಧಾನ ಗುರುಗಳಾದ ಸಿ.ಟಿ. ಹುರಕಣ್ಣವರ ಸ್ವಾಗತಿಸಿದರು. ಡಿ.ಎಂ. ದ್ಯಾಮಣ್ಣವರ ನಿರೂಪಿಸಿದರು. ಎಸ್.ಎನ್. ಮೇಟಿ ವಂದಿಸಿದರು.



