ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಇಂದಿನ ದಿನಗಳಲ್ಲಿ ಸಮಾಜದಲ್ಲಿನ ವಿವಿಧ ಹಿಂದೂ ಪಂಗಡಗಳನ್ನು ಒಗ್ಗೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಅದಕ್ಕಾಗಿ ಎಲ್ಲೆಡೆ ಇಂತಹ ಸಭೆಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಹುಬ್ಬಳ್ಳಿಯ ರವಿ ಮುಂಡಗೋಡ ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ಹಿಂದೂ ಸಮ್ಮೇಳನದ ಹೋಬಳಿ ವಿಸ್ತೃತ ಬೈಠಕ್ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಸಮಾಜಮುಖಿ ಕಾರ್ಯಕ್ಕೆ ಸದ್ಭಾವನಾ ಗೋಷ್ಠಿ ನಡೆಸಲಾಗುವದು. ನರೇಗಲ್ಲ ಹೋಬಳಿಯ ವ್ಯಾಪ್ತಿಯಲ್ಲಿ ಈ ಸಮಾವೇಶ ಮಾಡಲು ನಿರ್ಧರಿಸಲಾಗಿದೆ. ಹಿಂದೂ ನಾಗರಿಕತೆ, ಹಿಂದೂ ಸಂಸ್ಕೃತಿಗಳ ಚಿಂತನ-ಮಂಥನಗಳನ್ನು ನಡೆಸುವದು ಇದರ ಉದ್ದೇಶವಾಗಿದೆ. ಜಾತಿ, ಮತ, ಪಂಥಗಳಿಂದ ಒಡೆದು ಹೋದ ಅಖಂಡ ಹಿಂದೂ ಸಮಾಜವನ್ನು ಒಗ್ಗೂಡಿಸುವದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.
ಇತ್ತೀಚಿನ ಕೆಲವೊಂದು ರಾಷ್ಟ್ರಗಳಲ್ಲಿ ಹಿಂದೂಗಳ ಮೇಲೆ ನಿರಂತರ ಮಾರಣಾಂತಿಕ ಹಲ್ಲೆಗಳಾಗುತ್ತಿವೆ. ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ಖಂಡನೀಯ. ಎಲ್ಲದಕ್ಕೂ ಉತ್ತರ ಕೊಡುವದಕ್ಕೆ ಸಂಘಟನೆಯೊಂದೇ ರಾಮಬಾಣ. ಕಳೆದ ನೂರು ವರ್ಷಗಳಿಂದ ನಡೆದು ಬಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಮಹತ್ವ ಹಾಗೂ ರಾಷ್ಟ್ರೀಯ ಚಿಂತನೆಗಳ ಮಹತ್ವವನ್ನು ಇಡೀ ಜಗತ್ತಿಗೆ ಸಾರಿ ತಿಳಿಸೋಣ ಎಂದರು.
ಸಭೆಯಲ್ಲಿ ಡಾ. ಆರ್.ಕೆ. ಗಚ್ಚಿನಮಠ, ಆನಂದ ಕುಲಕರ್ಣಿ, ರಘುನಾಥ ಕೊಂಡಿ, ಬಸವರಾಜ ವಂಕಲಕುಂಟಿ, ಶಶಿಧರ ಸಂಕನಗೌಡ್ರ, ಉಮೇಶ ಸಂಗನಾಳಮಠ, ಬಾಳಪ್ಪ ಸೋಮಗೊಂಡ, ಶಿವಾನಂದ ಇಟಗಿ, ಕಳಕಪ್ಪ ಪೂಜಾರ, ಮುತ್ತಣ್ಣ ಪಲ್ಲೇದ, ನಾರಾಯಣ ವಡ್ಡಟ್ಟಿ, ಚನಬಸಪ್ಪ ಕುಷ್ಟಗಿ, ಚಂದ್ರಾಮ ಗ್ರಾಮಪುರೋಹಿತ, ಶಿವನಾಗಪ್ಪ ದೊಡ್ಡಮೇಟಿ, ಮಲ್ಲಿಕಾರ್ಜುನ ಹರ್ಲಾಪೂರ, ಪುಂಡಪ್ಪ ಮಡಿವಾಳರ, ಹನಮಂತಗೌಡ ಪಾಟಿಲ, ಜ್ಯೋತಿ ಪಾಯಪ್ಪಗೌಡ್ರ, ಸುರೇಖಾ ರಾಯಬಾಗಿ, ಅರ್ಚನಾ ಕುಲಕರ್ಣಿ, ಜ್ಯೋತಿ ಒಂಕಲಕುಂಟಿ, ಗೀತಾ ಮುಗಳಿ, ಸುಮಾ ಕಲ್ಲೂರ ಸೇರಿದಂತೆ ಹೋಬಳಿಯ ಗ್ರಾಮಸ್ಥರು ಉಪಸ್ಥಿತರಿದ್ದರು.
ಸುರೇಶ ರಾಯಬಾಗಿ ಸ್ವಾಗತಿಸಿದರು. ಮಂಜುನಾಥ ಹೆಗಡೆ ನಿರೂಪಿಸಿದರು. ಮೌನೇಶ ಹೊಸಮನಿ ವಂದಿಸಿದರು.



