ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಎ.ಪಿ.ಎಮ್.ಸಿ ಪ್ರಾಂಗಣದಲ್ಲಿ ಇರುವ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ರವಿವಾರ ತಿಥಿ ಅನುಸಾರ 164ನೇ ವಿವೇಕಾನಂದ ಜಯಂತ್ಯುತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಸ್ವಾಮಿ ನಿರ್ಭಯಾನಂದ ಸರಸ್ವತಿ ಹಾಗೂ ಸ್ವಾಮಿ ಜಗನ್ನಾಥಾನಂದ ಅವರು ವಹಿಸುವರು.
ಮುಂಜಾನೆ 5.30ಕ್ಕೆ ಆರತಿ, 6.30ಕ್ಕೆ ಪ್ರಾರ್ಥನೆ, 8ಕ್ಕೆ ಪೂಜೆ, 10ಕ್ಕೆ ಶಿವಸಹಸ್ರನಾಮ ಪಾರಾಯಣ ಮತ್ತು ಭಜನೆ, ಪೂರ್ವಾಹ್ನ 11ಕ್ಕೆ ಹೋಮ, 12ಕ್ಕೆ ಸ್ವಾಮಿ ನಿರ್ಭಯಾನಂದ ಸರಸ್ವತಿಯವರಿಂದ ಉಪನ್ಯಾಸ, ಮಧ್ಯಾಹ್ನ 1.30ಕ್ಕೆ ಮಹಾ ಪ್ರಸಾದ ಹಾಗೂ ಸಂಜೆ 6ರಿಂದ 7.30ರವರೆಗೆ ಭಜನೆ, ರಾತ್ರಿ 8.15ಕ್ಕೆ ಮಂಗಳಾರತಿ, 8.30ಕ್ಕೆ ಮಹಾ ಪ್ರಸಾದ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು, ಆಶ್ರಮ ಸದ್ಭಕ್ತರು, ರಾಮಕೃಷ್ಣ, ವಿವೇಕಾನಂದ ಹಾಗೂ ಶಾರದಾ ಮಾತೆಯ ಆರಾಧಕರು, ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಟಣೆ ತಿಳಿಸಿದೆ.



