HomeHaveriಸೋಲುವ ಹತಾಶೆಯಿಂದ ಆರೆಸ್ಸೆಸ್ ಟೀಕೆಗಿಳಿದ ಎಚ್ಡಿಕೆ, ಸಿದ್ದರಾಮಯ್ಯ

ಸೋಲುವ ಹತಾಶೆಯಿಂದ ಆರೆಸ್ಸೆಸ್ ಟೀಕೆಗಿಳಿದ ಎಚ್ಡಿಕೆ, ಸಿದ್ದರಾಮಯ್ಯ

For Dai;y Updates Join Our whatsapp Group

Spread the love

  • ಹಾನಗಲ್ ನಲ್ಲಿ ಸಿಎಂ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿಕೆ

ವಿಜಯಸಾಕ್ಷಿ ಸುದ್ದಿ, ಹಾವೇರಿ:

ಹಾನಗಲ್ ನಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನೂರಕ್ಕೆ ನೂರು ಶತಸಿದ್ಧ. ಕಾಂಗ್ರೆಸ್, ಜೆಡಿಎಸ್ ನಾಯಕರು ಹತಾಶೆಯಿಂದ ಆರೆಸ್ಸೆಸ್ ಟೀಕೆ ಮಾಡುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಆರೋಪಿಸಿದರು.

‌‌ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದ ಅವರು ಹಾನಗಲ್ ದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಅಭಿವೃದ್ಧಿ ಅಂದ್ರೆ ಉದಾಸಿ, ಉದಾಸಿ ಅಂದ್ರೆ ಅಭಿವೃದ್ಧಿ. ಅವರು ಕ್ಷೇತ್ರದ ಜನಮನಲ್ಲಿದ್ದಾರೆ ಎಂದರು.

ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಡಿಕೆಶಿ ಟೀಕೆ, ನಿಂದನೆ ಮಾಡಲು ಸ್ಪರ್ಧೆಗೆ ಇಳಿದಿದ್ದಾರೆ. ಅವರಿಗೆ ಸಂಘ ಪರಿವಾರ ಬೈಯದಿದ್ದರೆ ತಿಂದ ಅನ್ನ ಜೀರ್ಣ ಆಗಲ್ಲ. ಅಲ್ಪಸಂಖ್ಯಾತರ ಜಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಯಡಿಯೂರಪ್ಪನವರ ಅವಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಕಲ್ಯಾಣ ಮಾಡಿದ್ದಾರೆ. ನಾವು ಯಾವುದೇ ಕೋಮಿನ ವಿರೋಧಿಗಳಲ್ಲ. ಆದರೆ, ಜೆಡಿಎಸ್, ಕಾಂಗ್ರೆಸ್ ನವರು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಕುಮಾರಸ್ವಾಮಿ, ಸಿದ್ದರಾಮಯ್ಯಗೆ ಮಿದುಳೂ ಇಲ್ಲ. ತತ್ವ ಸಿದ್ಧಾಂತವೂ ಇಲ್ಲ ಎಂದು ಮಾತಿನ ಚಾಟಿ ಬೀಸಿದರು.

ಡಿಕೆಶಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಗಾದಿಗಾಗಿ ಪರಸ್ಪರ ಬಡಿದಾಡಿಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿ ಮೆಚ್ಚಿಸಲು ಆರ್ ಎಸ್ ಎಸ್ ಬೈಯುತ್ತಾರೆ. ದೇಶದಲ್ಲಿ ಕಾಂಗ್ರೆಸ್ ಗೆ ಅಡ್ರೆಸ್ ಇಲ್ಲ ಎಂದು ಕುಟುಕಿದರು.

ಮಾಜಿ ಸಿಎಂ ಕುಮಾರಸ್ವಾಮಿಯವರೇ ಒಮ್ಮೆ ಆರೆಸ್ಸೆಸ್ ಶಾಖೆಗೆ ಬನ್ನಿ, ನಮಸ್ತೆ ಸದಾ ವತ್ಸಲೇ ಪ್ರಾರ್ಥನೆ ಮಾಡಿ, ಬೆಳಗ್ಗೆ ಭಾಗವಾ ಧ್ವಜಕ್ಕೆ ನಮಸ್ಕಾರ ಮಾಡಿ ಎಂದು ಸಲಹೆ ನೀಡಿದ ರೇಣುಕಾಚಾರ್ಯ, ಬ್ಲೂ ಫಿಲಂ ಅನುಭವ ನಿಮಗೆ ಇರಬೇಕು. ನಿಮ್ಮ ಪಕ್ಷದಲ್ಲಿರಬೇಕು.

ಹಿಡಿದು ಮರಿ ಮಕ್ಕಳ ವರೆಗೆ ಕುಟುಂಬ ರಾಜಕಾರಣ ಮಾಡುವುದೇ ರಾಜ್ಯಕ್ಕೆ ನೀವು ನೀಡಿದ ಕೊಡುಗೆಯಾಗಿದೆ ಎಂದರು. ಸಿದ್ದರಾಮಯ್ಯ ನವರು
ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂಬ ಆಸೆಯಿಂದ ಹಗುರವಾಗಿ ಮತನಾಡುತ್ತಿದ್ದಾರೆ. ಡಿಕೆಶಿ ಬ್ಲಾಕ್ ಮೇಲ್ ತಂತ್ರಗಾರಿಕೆ ಹೆಸರಾದವರು. ಬತ್ತಳಿಕೆಯಲ್ಲಿ ಬಾಣ ಇದ್ದರೆ ಈಗಲೇ ತೆಗೆಯರಿ. ನೀವು ಇನ್ನೂ 20 ವರ್ಷ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತೀರಿ ಎಂದು ಹರಿಹಾಯ್ದರು.

ಮಾಜಿ ಸಿಎಂ ಯಡಿಯೂರಪ್ಪ ಯಾವತ್ತಿದ್ದರೂ ರಾಜಾಹುಲಿನೇ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತೆ ಎಂದು ಈಗಲೂ ಜನ ಹೇಳುತ್ತಾರೆ ಎಂದು ರೇಣುಕಾಚಾರ್ಯ ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!