ವಿಜಯಸಾಕ್ಷಿ ಸುದ್ದಿ, ಗದಗ:
ಗದಗನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಬುಧವಾರ(ನ.೨೩) ರಾತ್ರಿ ಗರ್ಭಿಣಿಯೋರ್ವರನ್ನು ಹುಬ್ಬಳ್ಳಿಗೆ ಕರೆದೋಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯೆ ಆ್ಯಂಬುಲೆನ್ಸ್ ನಲ್ಲೇ ಹೆರಿಗೆಯಾಗಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ.
ಗಜೇಂದ್ರಗಡ ತಾಲೂಕಿನ ನಿಡಗುಂದಿಕೊಪ್ಪ ಗ್ರಾಮದಿಂದ ಹೆರಿಗೆಗೆ ಬಂದಿದ್ದ ಕವಿತಾ ಪೂಜಾರಿ ಎಂಬ ಮಹಿಳೆಗೆ 108 ವಾಹನದ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ನಗರದ ಹೃದಯಭಾಗ ಮುಳಗುಂದ ನಾಕಾ ಬಳಿ ಸುಸೂತ್ರವಾಗಿ ಹೆರಿಗೆ ಆಗಿದ್ದು, ಸದ್ಯ ಹೆರಿಗೆ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ರಕ್ತ ಕಡಿಮೆ ಇದ್ದ ಕಾರಣ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಇಲ್ಲಿನ ವೈದ್ಯರು ಸೂಚಿಸಿದ್ದರು. ಆದರೆ, ಕುಟುಂಬಸ್ಥರು
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಕರೆದೋಯ್ದಾಗಲೂ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದರು.
ಮಗುವಿನ ಕುತ್ತಿಗೆಗೆ ಕರುಳ ಬಳ್ಳಿ ಸಿಕ್ಕು ಪರದಾಟ ನಡೆಸುತ್ತಿದ್ದ ಮಹಿಳೆಯ ಹೆರಿಗೆಯನ್ನು
ತುರ್ತು ತಜ್ಞ ರವಿ ಬಡಿಗೇರ್, 108 ಪೈಲೆಟ್ ದಸ್ತಗೀರ್ ಸಾಬ್ ಹುಡೇದ್, ಆಶಾ ಕಾರ್ಯಕರ್ತೆ ಮುತ್ತವ್ವ ಮಾಡಿಸಿಕೊಂಡಿದ್ದಾರೆ.