Home Entertainment ಉದ್ಯಮಿಗೆ 7 ಕೋಟಿ ಬ್ಲ್ಯಾಕ್‌ಮೇಲ್ ಆರೋಪ: ಕೃಷಿ ತಾಪಂಡ ಆಪ್ತನ ಬಂಧನ, ನಟಿಗೆ ಪೊಲೀಸ್ ನೋಟಿಸ್

ಉದ್ಯಮಿಗೆ 7 ಕೋಟಿ ಬ್ಲ್ಯಾಕ್‌ಮೇಲ್ ಆರೋಪ: ಕೃಷಿ ತಾಪಂಡ ಆಪ್ತನ ಬಂಧನ, ನಟಿಗೆ ಪೊಲೀಸ್ ನೋಟಿಸ್

0
ಉದ್ಯಮಿಗೆ 7 ಕೋಟಿ ಬ್ಲ್ಯಾಕ್‌ಮೇಲ್ ಆರೋಪ: ಕೃಷಿ ತಾಪಂಡ ಆಪ್ತನ ಬಂಧನ, ನಟಿಗೆ ಪೊಲೀಸ್ ನೋಟಿಸ್
Spread the love

ನಟಿ ಕೃಷಿ ತಾಪಂಡ ಹಾಗೂ ಎಆರ್‌ವಿ ಗ್ರೂಪ್ ಮಾಲೀಕ ಅರವಿಂದ್ ರೆಡ್ಡಿ ನಡುವಿನ ವಿವಾದ ಇದೀಗ ಕೇವಲ ಆರೋಪ–ಪ್ರತ್ಯಾರೋಪಗಳ ಹಂತ ಮೀರಿ ಕ್ರಿಮಿನಲ್ ತನಿಖೆಯ ದಾರಿಗೆ ಕಾಲಿಟ್ಟಿದೆ. ಉದ್ಯಮಿ ಅರವಿಂದ್ ರೆಡ್ಡಿಗೆ ಏಳು ಕೋಟಿ ರೂಪಾಯಿ ಹಣ ಬೇಡಿಕೆ ಇಟ್ಟು ಬೆದರಿಕೆ ಹಾಕಿದ ಪ್ರಕರಣದಲ್ಲಿ ನಟಿ ಕೃಷಿ ತಾಪಂಡ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಮಾನಸಿಕ ಕಿರುಕುಳ ಆರೋಪಿಸಿ ಕೃಷಿ ತಾಪಂಡ ನೀಡಿದ್ದ ದೂರಿನ ಬಳಿಕ ಉದ್ಯಮಿ ಅರವಿಂದ್ ರೆಡ್ಡಿ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದವು. ಇದಕ್ಕೆ ಪ್ರತಿಯಾಗಿ ಅರವಿಂದ್ ರೆಡ್ಡಿ, ನಟಿಗಾಗಿ ಕೋಟ್ಯಂತರ ರೂಪಾಯಿ ಹಣ ವೆಚ್ಚ ಮಾಡಿದ್ದು, ಹಣಕ್ಕಾಗಿ ತಮ್ಮನ್ನು ಬಳಸಿಕೊಂಡಿದ್ದಾರೆ ಎಂದು ಬಹಿರಂಗ ಆರೋಪಗಳನ್ನು ಮಾಡಿದ್ದರು.

ಈ ನಡುವೆಯೇ ಅರವಿಂದ್ ರೆಡ್ಡಿಗೆ ಬಂದ ಬೆದರಿಕೆ ಪತ್ರ ಪ್ರಕರಣಕ್ಕೆ ಸಂಪೂರ್ಣ ಹೊಸ ತಿರುವು ನೀಡಿದೆ. ಪತ್ರದಲ್ಲಿ ಮಹಿಳೆಗೆ ಸಂಬಂಧಿಸಿದ ಪ್ರಕರಣವನ್ನು ಬಗೆಹರಿಸುವಂತೆ ಹಾಗೂ ಏಳು ಕೋಟಿ ರೂಪಾಯಿ ಹಣ ನೀಡದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿತ್ತು.

ಪತ್ರದ ಮೂಲವನ್ನು ಪತ್ತೆ ಹಚ್ಚಿದ ಪೊಲೀಸರು, ಅದು ಬನಶಂಕರಿಯಿಂದ ಕೊರಿಯರ್ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಂಡಿದ್ದು, ಬಳಿಕ ಮೆಕ್ಯಾನಿಕ್ ವೈಶಾಖ್ ಎಂಬಾತನನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಬಂಧಿತ ವೈಶಾಖ್ ನಟಿ ಕೃಷಿ ತಾಪಂಡ ಅವರ ಆಪ್ತನಾಗಿದ್ದು, ಪತ್ರ ಕೊರಿಯರ್ ಮಾಡಲು ಸೂಚನೆ ದೊರೆತಿದೆ ಎಂದು ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದಾನೆ.

ಇನ್ನಷ್ಟು ಅನುಮಾನ ಹುಟ್ಟಿಸಿರುವ ಅಂಶವೆಂದರೆ, ವೈಶಾಖ್ ತನ್ನ ಮೊಬೈಲ್ ಫೋನ್ ಅನ್ನು ಕೃಷಿ ತಾಪಂಡ ಮನೆಯಲ್ಲೇ ಅಡಗಿಸಿಟ್ಟಿದ್ದಾನೆ ಎನ್ನುವ ಪೊಲೀಸರ ಶಂಕೆ. ಈ ಹಿನ್ನೆಲೆ ನಟಿ ಕೃಷಿ ತಾಪಂಡ ಅವರನ್ನು ವಿಚಾರಣೆಗೆ ಕರೆದಿದ್ದು, ಪ್ರಕರಣದ ತನಿಖೆ ಇದೀಗ ಮತ್ತಷ್ಟು ತೀವ್ರಗೊಂಡಿದೆ.

ಈ ಹೈ-ಪ್ರೊಫೈಲ್ ಪ್ರಕರಣದಲ್ಲಿ ಇನ್ನೂ ಹಲವು ಸ್ಫೋಟಕ ಸಂಗತಿಗಳು ಹೊರಬರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


Spread the love

LEAVE A REPLY

Please enter your comment!
Please enter your name here