HomeLife Styleಊಟ ಕಡಿಮೆ ತಿಂದ್ರೂ ಅಸಿಡಿಟಿ ಆಗುತ್ತಾ? ಹಾಗಿದ್ರೆ ಮೊದಲು ಇದಕ್ಕೆ ಕಾರಣ ತಿಳಿಯಿರಿ!

ಊಟ ಕಡಿಮೆ ತಿಂದ್ರೂ ಅಸಿಡಿಟಿ ಆಗುತ್ತಾ? ಹಾಗಿದ್ರೆ ಮೊದಲು ಇದಕ್ಕೆ ಕಾರಣ ತಿಳಿಯಿರಿ!

For Dai;y Updates Join Our whatsapp Group

Spread the love

ಇತ್ತೀಚಿನ ದಿನಗಳಲ್ಲಿ ಹೊಟ್ಟೆಯಲ್ಲಿ ಜೀರ್ಣಸಂಬಂಧಿ ಸಮಸ್ಯೆಗಳು ಹೆಚ್ಚಾಗಿವೆ.

ಹೆಚ್ಚು ಮಸಾಲೆಯ ಆಹಾರ ಅಥವಾ ಅತಿಯಾದ ಆಹಾರ ಸೇವನೆಯಿಂದ ಮಾತ್ರವಲ್ಲ, ಕೆಲವೊಂದು ಸಂದರ್ಭಗಳಲ್ಲಿ ಹೊಟ್ಟೆಯ ಆಮ್ಲ ಪ್ರಮಾಣ ಕಡಿಮೆಯಾಗುವುದೂ ಸಮಸ್ಯೆಗೆ ಕಾರಣವಾಗಬಹುದು. ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲವು ಆಹಾರ ಜೀರ್ಣಗೊಳಿಸಲು ಮತ್ತು ಅಗತ್ಯ ಪೋಷಕಾಂಶಗಳನ್ನು ಶೋಷಿಸಲು ನೆರವಾಗುತ್ತದೆ.

ಆದರೆ ವಯಸ್ಸು, ದೀರ್ಘಕಾಲಿಕ ಔಷಧಿ ಬಳಕೆ, ಒತ್ತಡ, ಪೌಷ್ಟಿಕಾಂಶ ಕೊರತೆ, ವಿಟಮಿನ್ B12 ಕೊರತೆ ಮತ್ತು ಅಸಮತೋಲಿತ ಆಹಾರ ಪದ್ಧತಿಗಳಿಂದಾಗಿ ಈ ಆಮ್ಲದ ಪ್ರಮಾಣ ಕಡಿಮೆಯಾಗಬಹುದು. ಹೀಗೆ ಆದರೆ ಆಹಾರ ಸರಿಯಾಗಿ ಜೀರ್ಣವಾಗದೇ ಅನಿಲ, ಎದೆ ಸುಡುವಿಕೆ ಮತ್ತು ಗಂಟಲಿನಲ್ಲಿ ಕಿರಿಕಿರಿ ಸಂಭವಿಸಬಹುದು.

ಈ ಸಮಸ್ಯೆ ತಡೆಯಲು ನಿಯಮಿತವಾಗಿ ದಿನಕ್ಕೆ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಆಹಾರ ಸೇವನೆ ಮಾಡುವುದು, ಹುರಿದ ಮತ್ತು ಮಸಾಲೆ ಪದಾರ್ಥಗಳನ್ನು ಮಿತಿಗೊಳಿಸುವುದು, ಊಟದ ನಂತರ ತಕ್ಷಣ ಮಲಗದಂತೆ 30 ನಿಮಿಷ ನಿಂತು ನಡೆಯುವುದು, ನೀರಿನ ಪ್ರಮಾಣವನ್ನು ಹೆಚ್ಚಿಸುವುದು, ಹಾಗೂ ಯೋಗ ಮತ್ತು ಧ್ಯಾನ ಅಭ್ಯಾಸ ಮಾಡುವುದರಿಂದ ಹೊಟ್ಟೆಯ ಆರೋಗ್ಯ ಸುಧಾರಿಸಬಹುದು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!