ಗದಗ: ಜಿಲ್ಲೆಯಲ್ಲಿ ಸರಣಿ ಮನೆ ಕಳ್ಳತನ ಪ್ರಕರಣಗಳಿಂದ ಆತಂಕ ಸೃಷ್ಟಿಸಿದ್ದ ಅಂತರರಾಜ್ಯ ಕಳ್ಳರ ಸಂಘಟಿತ ಜಾಲವನ್ನು ಗದಗ ಪೊಲೀಸರು ಭೇದಿಸಿ ಭಾರೀ ಸಾಧನೆ ಮಾಡಿದ್ದಾರೆ. ಬೆಟಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣದ ತನಿಖೆಯಲ್ಲಿ ಒಟ್ಟು 14 ಪ್ರಕರಣಗಳನ್ನು ಪತ್ತೆ ಹಚ್ಚಿ, 11 ಆರೋಪಿಗಳನ್ನು ಬಂಧಿಸಿ, ಸುಮಾರು ₹1,26,53,780 ಮೌಲ್ಯದ ಆಭರಣ ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ
ಎಪ್ರಿಲ್ 1, 2026ರಂದು ಬೆಟಗೇರಿ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಖ್ಯೆ 22/2025ರಲ್ಲಿ ₹3.25 ಲಕ್ಷ ಮೌಲ್ಯದ ಆಭರಣ ಕಳವು ಮಾಡಲಾಗಿತ್ತು. ವಿಜಯಲಕ್ಷ್ಮೀ ಕೋಂ ಸಂಪತ್ ಕುಮಾರ ಜಾಡಗೌಡ ಅವರು ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ IPS ಹಾಗೂ ಉಪ ಪೊಲೀಸ್ ಅಧೀಕ್ಷಕ ಮುರ್ತಾಜಾ ಖಾದ್ರಿ ಅವರ ಮಾರ್ಗದರ್ಶನದಲ್ಲಿ ಬೆಟಗೇರಿ ಠಾಣೆಯ ಸಿಪಿಐ ಧೀರಜ್ ಬಿ. ಸಿಂಧೆ, ಪಿಎಸ್ಐ ಮಾರುತಿ ಎಸ್. ಜೋಗದಂಡಕರ, ಎಎಸ್ಐಗಳಾದ ಐ.ಎಸ್. ಲಮಾಣಿ, ಬಿ.ಎಫ್. ಯರಗುಪ್ಪಿ ಹಾಗೂ ಸಿಬ್ಬಂದಿಗಳಾದ ಜಿ.ಡಿ. ಹೂಲಿ, ಆನಂದಸಿಂಗ್ ದೊಡಮನಿ, ಎನ್.ಡಿ. ನದಾಫ್, ಎಸ್.ಬಿ. ಬಣಕಲ್, ಪರಶುರಾಮ ದೊಡಮನಿ,

ಪ್ರವೀಣ ಕಲ್ಲೂರ, ನಾಗರಾಜ ಬರಡಿ, ಅಶೋಕ್ ಗದಗ, ಅವಿನಾಶಸಿಂಗ್ ಬ್ಯಾಳಿ, ಮಂಜುನಾಥ ಅಸೂಟಿ, ಕುಮಾರ ತಿಗರಿ, ಅಣ್ಣಪ್ಪ ಕವಲೂರ, ಎನ್.ಡಿ. ಹುಬ್ಬಳ್ಳಿ, ಎಸ್.ಹೆಚ್. ದೊಣಿ ಹಾಗೂ ತಾಂತ್ರಿಕ ಸಹಾಯಕರಾದ ಗುರುರಾಜ ಬೂದಿಹಾಳ, ಸಂಜು ಕೊರಡೂರು ಒಳಗೊಂಡ ವಿಶೇಷ ತಂಡ ಕಾರ್ಯಚರಣೆ ನಡೆಸಿ 1) ಸುರೇಶ್ @ ಸಣ್ಣ ಸುರೇಶ್, ತಂದೆ ಸತ್ಯಪ್ಪ ಸಿಂಗನೂರು, ವಯಸ್ಸು 27 ವರ್ಷ, ಸಾ: ಕಾದ್ರೋಳಿ, ತಾ: ಕಿತ್ತೂರು, ಜಿ: ಬೆಳಗಾವಿ, 2) ನಾಗಪ್ಪ, ತಂದೆ ತಿಮ್ಮಪ್ಪ ದುರಗಮುರಗಿ, ವಯಸ್ಸು 45 ವರ್ಷ,
ಸಾ: ಅಳ್ನಾವರ, ಜಿ: ಧಾರವಾಡ, 3) ಶಿವು, ತಂದೆ ಸುಂಕಪ್ಪ ಬೆಳಗಂಟಿ, ವಯಸ್ಸು 24 ವರ್ಷ, ಸಾ: ಗರಗ, ತಾ/ಜಿ: ಧಾರವಾಡ, 4) ಸುರೇಶ್ @ ದೊಡ್ಡ ಸುರೇಶ್, ತಂದೆ ಬಾಬು ತವಮ್ಮನವರ್, ವಯಸ್ಸು 35 ವರ್ಷ, ಸಾ: ದಡ್ಡಿ, ತಾ: ಹುಕ್ಕೇರಿ, ಜಿ: ಬೆಳಗಾವಿ, 5) ಶಂಕರ @ ಕುಡ್ಡ ಶಂಕರ, ತಂದೆ ಯಲ್ಲಪ್ಪ ಕರಿ, ವಯಸ್ಸು 24 ವರ್ಷ, ಸಾ: ವೆಂಕಟಾಪುರ, ತಾ/ಜಿ: ಧಾರವಾಡ, 6) ಮಂಜುನಾಥ, ತಂದೆ ನಾಗರಾಜ ಬಾದಗಿ, ವಯಸ್ಸು 30 ವರ್ಷ, ಸಾ: ಧಾರವಾಡ, ತಾ/ಜಿ: ಧಾರವಾಡ, 7) ಹುಲಗಪ್ಪ, ತಂದೆ ಫಕೀರಪ್ಪ ಬೆಳಗಾಲಪೇಟೆ, ವಯಸ್ಸು 19 ವರ್ಷ, ಸಾ: ಬೆಳಗಾಲಪೇಟೆ,

ತಾ: ಹಾನಗಲ್, ಜಿ: ಹಾವೇರಿ, 8) ಆನಂದ, ತಂದೆ ದುರಗಪ್ಪ ಯರಗಣ್ಣವರ್, ವಯಸ್ಸು 21 ವರ್ಷ, ಸಾ: ಮುನವಳ್ಳಿ, ತಾ/ಜಿ: ಧಾರವಾಡ, ಇನ್ನೊಂದು ಪ್ರಕರಣದ ಆರೋಪಿಗಳಾದ 9) ಗಂಗಾರಾಮ, ತಂದೆ ಬೈರಾಮ ಚವಾಣ್, ವಯಸ್ಸು 50 ವರ್ಷ, ಜಾತಿ ಹಿಂದೂ ಪಾರದಿ (ಹರಣಶಿಕಾರಿ), ಸಾ: ಮೊಗಾಬಿ, ತಾ: ಆಳಂದ, ಜಿ: ಕಲಬುರಗಿ, 10) ಕನಿರಾಮ, ತಂದೆ ಕಮಸರ ಚವಾಣ್,
ವಯಸ್ಸು 60 ವರ್ಷ, ಜಾತಿ ಹಿಂದೂ ಪಾರದಿ (ಹರಣಶಿಕಾರಿ), ಸಾ: ಶಕಾಪುರ, ತಾ: ಆಳಂದ, ಜಿ: ಕಲಬುರಗಿ ಹಾಗೂ 11) ಶ್ರೀಕಾಂತ್, ತಂದೆ ಶರಣಪ್ಪ ದೂಧಳೆ @ ಪೂಜಾರಿ, ವಯಸ್ಸು 44 ವರ್ಷ, ಸಾ: ಮೊಗಾಬಿ, ತಾ: ಆಳಂದ, ಪ್ರಸ್ತುತ: ಶಿವಶಕ್ತಿ ನಗರ, ತುರುಬೆ ಸ್ಟೋರ್ಸ್ ಹತ್ತಿರ, ಮುಂಬೈ, ಮಹಾರಾಷ್ಟ್ರ ಇವರನ್ನು ಬಂಧಿಸಲಾಗಿದೆ.
ಬಂಧಿತರಿಂದ 587 ಗ್ರಾಂ ಬಂಗಾರದ ಆಭರಣಗಳು ಅಂದಾಜು ಮೌಲ್ಯ ₹89,22,400 ರೂ.ಗಳು.
₹9,31,680 ಮೌಲ್ಯದ 3822 ಗ್ರಾಂ ಬೆಳ್ಳಿಯ ಆಭರಣಗಳು ಹಾಗೂ ₹9,33,000 ರೂ.ಮೌಲ್ಯದ 4 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಒಟ್ಟು ₹1,07,87 ,080 ವಶಪಡಿಸಿಕೊಳ್ಳಲಾಗಿದೆ.
ಹಾಗೆಯೇ ಮತ್ತೊಂದು ಪ್ರಕರಣವನ್ನು ಭೇದಿಸಿರುವ ಪೊಲೀಸರು, 116 ಗ್ರಾಂ –ಬಂಗಾರದ ಆಭರಣಗಳು ಅಂದಾಜು ಮೌಲ್ಯ ₹17,32,800 ಹಾಗೂ 515 ಗ್ರಾಂ –ಬೆಳ್ಳಿಯ ಆಭರಣಗಳು ಅಂದಾಜು ಮೌಲ್ಯ ₹1,33,900 ರೂ. ಜಪ್ತಿ ಮಾಡಿದ್ದಾರೆ.
ಇನ್ನೂ ಕಳ್ಳತನ ಪ್ರಕರಣಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಮುಂದುವರಿಯಲಿದೆ. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ತಂಡದ ಪರಿಶ್ರಮ ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರೋಹನ್ ಜಗದೀಶ್ ಹೇಳಿದ್ದಾರೆ.



