ವಿಜಯಸಾಕ್ಷಿ ಸುದ್ದಿ, ಮುಳಗುಂದ: ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದುದು. ಮಕ್ಕಳ ನಿಷ್ಕಳಂಕ ಮನಸ್ಸುಗಳ ಜೊತೆ ಕಳೆದ ಕ್ಷಣಗಳು ಬದುಕಿಗೆ ಸಾರ್ಥಕತೆ ನೀಡಿವೆ ಎಂದು ನಿವೃತ್ತ ಶಿಕ್ಷಕಿ ಎಸ್.ವಿ. ಹಿರೇಮಠ ಭಾವುಕರಾಗಿ ನುಡಿದರು.
ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.1ರಲ್ಲಿ ನಿವೃತ್ತ ಶಿಕ್ಷಕರಾದ ಎಸ್.ವಿ. ಹಿರೇಮಠ, ಎಸ್.ಎಚ್. ಉಪ್ಪಾರ ಹಾಗೂ ವರ್ಗಾವಣೆಗೊಂಡ ಎಂ.ಎಂ. ಕೊಪ್ಪಳ ಅವರಿಗೆ ಆಯೋಜಿಸಿದ್ದ ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಕರ ವೃತ್ತಿಯಲ್ಲಿ ಎದುರಾಗುವ ಕಷ್ಟಗಳು ಮಕ್ಕಳ ಜೊತೆಗಿನ ಆತ್ಮೀಯತೆಯಿಂದ ಮರೆಯಾಗುತ್ತವೆ. ಶಾಲೆಯೊಂದಿಗಿನ ನೆನಪುಗಳು ಜೀವನಪೂರ್ತಿ ಉಳಿಯುತ್ತವೆ ಎಂದು ಹೇಳಿದರು.
ನಿವೃತ್ತ ಶಿಕ್ಷಕರಾದ ಎಸ್.ಎಚ್. ಉಪ್ಪಾರ ಮಾತನಾಡಿ, ಶಿಕ್ಷಕರ ವೃತ್ತಿಯಿಂದ ಸಾವಿರಾರು ಮಕ್ಕಳ ಭವಿಷ್ಯ ರೂಪಿಸುವ ಅವಕಾಶ ದೊರೆತಿದ್ದು, ಅದು ಜೀವನದಲ್ಲಿ ಅಪಾರ ತೃಪ್ತಿ ನೀಡಿದೆ ಎಂದರು.
ವರ್ಗಾವಣೆಗೊಂಡ ಶಿಕ್ಷಕರಾದ ಎಂ.ಎಂ. ಕೊಪ್ಪಳ ಮಾತನಾಡಿ, “ಕಲಿತ ಶಾಲೆಯಲ್ಲೇ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಪೂರ್ವಜನ್ಮದ ಪುಣ್ಯ. ವರ್ಗಾವಣೆ ಸಾಮಾನ್ಯ ಪ್ರಕ್ರಿಯೆಯಾಗಿದ್ದರೂ ಮತ್ತೆ ಅವಕಾಶ ಸಿಕ್ಕರೆ ಇದೇ ಶಾಲೆಗೆ ಮರಳಿ ಬರುವೆ” ಎಂದು ಭಾವುಕರಾದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಡಿ. ಸಿದ್ದನಗೌಡರ ವಹಿಸಿದ್ದರು. ಶಾಲಾ ಪ್ರಧಾನಗುರು ಎಲ್.ಎ. ನಡುವಿನಮನಿ, ಸೇರಿದಂತೆ ಪಿ.ಬಿ. ಕೆಂಚನಗೌಡರ, ಎಂ.ಎಂ. ಮೆಗಲಮನಿ, ಕೆ.ಎಂ. ಹೆರಕಲ್ಲ, ಶಿದ್ದಲಿಂಗೇಶ ಶಿರಕೋಳ, ಎಸ್.ಎಸ್. ಹುಣಶಿಮರದ, ಜಿ.ಎಂ. ಗಾಡಿ, ಎಚ್.ಆರ್. ಭಜೆಂತ್ರಿ, ಟಿ. ವೀಣಾ, ವಿ.ಎಂ. ಕಂಠಿ, ಎಸ್.ಡಿ. ಪಂಡಿತ, ತ್ರೀವೇಣಿ ಬಡ್ನಿ, ರತ್ನಾ ಬಬಲಿ, ಶೈಲಾ ದೊಡ್ಡಮನಿ, ಶಭಾನಾ ಢಾಲಾಯತ, ವಿದ್ಯಾ ಹಾಳಕೇರಿ, ಸಂಕಮ್ಮ ಯಳವತ್ತಿ, ರೇಣುಕಾ ಬಗಾಡೆ, ಲಕ್ಷ್ಮೀ ಬೆಂದ್ರೆ, ಮಾಬುಬ್ಬಿ ಹೊಸೂರ, ರೂಪಾ ಬಗಾಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಈ ಶಾಲೆ ನಮ್ಮ ಬದುಕಿಗೆ ಬೆಳಕಾಗಿದೆ. ಇಲ್ಲಿನ ಶಿಕ್ಷಕರ ಆತ್ಮೀಯತೆ ಎಂದಿಗೂ ಮರೆಯಲು ಸಾಧ್ಯವಿಲ್ಲ.”
ಎಸ್.ವಿ. ಹಿರೇಮಠ, ನಿವೃತ್ತ ಶಿಕ್ಷಕಿ



