ವಿಜಯಸಾಕ್ಷಿ ಸುದ್ದಿ, ಬೆಟಗೇರಿ: ಎಸ್.ಎಸ್.ಕೆ. ತರುಣ ಸಂಘ ಹಾಗೂ ಶ್ರೀ ಅಂಬಾಭವಾನಿ ದೇವಸ್ಥಾನ, ಬೆಟಗೇರಿ ಇವರ ಆಶ್ರಯದಲ್ಲಿ ನಡೆದ ಸಭೆಯಲ್ಲಿ 2026ನೇ ಸಾಲಿನ ಎಸ್.ಎಸ್.ಕೆ. ದಸರಾ ಉತ್ಸವ ಸಮಿತಿಯ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಮಿತಿಯ ಚೇರಮನ್ನರಾಗಿ ಸುರೇಶ ಎಸ್. ಮೇರವಾಡೆ, ವೈಸ್ ಚೇರಮನ್ನರಾಗಿ ಶ್ರೀರಾಮ ಎಸ್. ಹಬೀಬ, ಗೌರವ ಕಾರ್ಯದರ್ಶಿಯಾಗಿ ಹನುಮಂತಸಾ ಎಂ. ರಾಯಬಾಗಿ, ಸಹಕಾರ್ಯದರ್ಶಿಯಾಗಿ ಪ್ರಶಾಂತ ಟಿ. ಸೋಳಂಕಿ, ಖಜಾಂಚಿಯಾಗಿ ಸೋಮಶೇಖರ ಆರ್. ಮೇರವಾಡೆ ಹಾಗೂ ಲೆಕ್ಕ ತಪಾಸಿಗರಾಗಿ ನರಸಿಂಗಸಾ ವೈ. ಮೇರವಾಡೆ ಅವರನ್ನು ಆಯ್ಕೆ ಮಾಡಲಾಯಿತು.
ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಪಂಚ ಟ್ರಸ್ಟ್ ಕಮಿಟಿ, ತರುಣ ಸಂಘ, ಮಹಿಳಾ ಮಂಡಳದ ಸದಸ್ಯರು, ಪದಾಧಿಕಾರಿಗಳು ಹಾಗೂ ಸಮಾಜದ ಎಲ್ಲ ಬಾಂಧವರು ಅಭಿನಂದನೆ ಸಲ್ಲಿಸಿದ್ದಾರೆ.



