ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯಾಗಿ ನೇಮಕಗೊಂಡಿರುವ ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಟಿ.ವಿ. ವಾರುಣಿ ಅವರನ್ನು ಕೊಪ್ಪಳ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಸತ್ಕರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಡಾ. ವೀರಣ್ಣ ಸಜ್ಜನರ್, ಡಾ. ಸಣ್ಣದೇವೇಂದ್ರಸ್ವಾಮಿ, ಡಾ. ತುಕಾರಾಂ, ಡಾ. ಶಿವಬಸಪ್ಪ ಮಸ್ಕಿ, ಡಾ. ಮಹಾಂತೇಶ ನೆಲಾಗಣಿ, ಬಸವರಾಜ ಕರುಗಲ್, ಜ್ಞಾನೇಶ್ವರ ಪತ್ತಾರ, ಸೋಮೇಶ್, ವಿಜಯಕುಮಾರ್ ಕೆ., ಡಾ. ಗಿರಿಜಾ ತುರಮುರಿ ಹಾಗೂ ಡಾ. ಸಾವಿತ್ರಿ ಕಣವಿ ಉಪಸ್ಥಿತರಿದ್ದರು.



