ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖಾ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ನೌಕರರ ಕೇಂದ್ರ ಸಂಘ (ರಿ.), ಬೆಂಗಳೂರು, ಇದರ ಗದಗ ಜಿಲ್ಲಾ ಘಟಕದ ಪುನರ್ ರಚನೆ ಕಾರ್ಯಕ್ರಮ ನಗರದ ಅಂಬೇಡ್ಕರ್ ಭವನದಲ್ಲಿ ಸೆ.6ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಗದಗದ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಗೌರವಾಧ್ಯಕ್ಷರಾಗಿ ಪಾಲ್ಗೊಂಡು, ನೂತನ ಪದಾಧಿಕಾರಿಗಳಿಗೆ ಸಂಘಟನೆಯ ಜವಾಬ್ದಾರಿ ಹಾಗೂ ಕರ್ತವ್ಯಗಳ ಕುರಿತು ಮಾರ್ಗದರ್ಶನ ನೀಡಿದರು.
ವಿಶೇಷ ಆಹ್ವಾನಿತರಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರೆಡ್ಡಿ ಹಾಗೂ ಬೆಳಗಾವಿ ವಿಭಾಗದ ಕಾರ್ಯಾಧ್ಯಕ್ಷ, ಸಹಾಯಕ ನಿರ್ದೇಶಕ ಬಸವರಾಜ ಚನ್ನಯ್ಯ ಪಾಲ್ಗೊಂಡು, ಸಂಘಟನೆಯ ಉದ್ದೇಶ, ಕಾರ್ಯವೈಖರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಸಾರ್ವಜನಿಕರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ತಲುಪಿಸುವಲ್ಲಿ ಸಂಘದ ಪಾತ್ರದ ಕುರಿತು ಮಾತನಾಡಿದರು.
ಪುನರ್ ರಚನೆಯಾದ ಗದಗ ಜಿಲ್ಲಾ ಘಟಕಕ್ಕೆ ಬಾಲಚಂದ್ರ ಸಂಗನಾಳ ಅಧ್ಯಕ್ಷರಾಗಿ, ಗೋಪಾಲ ಲಮಾಣಿ, ಚಂದ್ರಕಾಂತ ವಡ್ಡರಕಲ್ಲ ಹಾಗೂ ವಸಂತ ಲಮಾಣಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿಶಾಲ ಅಶೋಕ ಹಾದಿಮನಿ ಪ್ರಧಾನ ಕಾರ್ಯದರ್ಶಿಯಾಗಿ, ವೆಂಕಟೇಶ ದ್ವಾಸಲಕೇರಿ ಕಾರ್ಯಾಧ್ಯಕ್ಷರಾಗಿ, ರಾಘವೇಂದ್ರ ಗೋಕಾಕ ಖಜಾಂಚಿಯಾಗಿ ಹಾಗೂ ಸವಿತಾ ಮೇತ್ರಿ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಕುಬೇರ ಲಮಾಣಿ ಹಾಗೂ ಎಲ್.ಎಂ. ಗಚ್ಚಿಮನಿ ಸಹ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಈಶ್ವರ ಲೋಕಾಪುರ, ನವೀನಕುಮಾರ್ ಹರಿಜನ, ವೆಂಕಟೇಶ ಪೂಜಾರ, ವೈ.ಡಿ. ದೊಡ್ಡಮನಿ, ಮಂಜುಳಾ ಅರಳಿಗಿಡದ, ಹೇಮಾವತಿ ಗೂಗಲೋತ್ರ ಹಾಗೂ ರೇಣುಕರಾಜ ಹರಿಜನ ಆಯ್ಕೆಯಾಗಿದ್ದಾರೆ ಎಂದು ಅಧ್ಯಕ್ಷ ಬಾಲಚಂದ್ರ ಸಂಗನಾಳ ತಿಳಿಸಿದ್ದಾರೆ.



