ಚಾಕುವಿನಿಂದ ಇರಿದು ಅಳಿಯನಿಂದ ಸೋದರ ಮಾವನ ಕೊಲೆ

0
Spread the love

ಹಾಸನ: ಹಾಸನ‌ ಜಿಲ್ಲೆ ಅರಸೀಕೆರೆ ತಾಲೂಕಿನ ಗಂಜಿಗೆರೆ ಗ್ರಾಮದಲ್ಲಿ ಚಾಕುವಿನಿಂದ ಇರಿದು ಅಳಿಯನಿಂದ ಸೋದರ ಮಾವನ ಕೊಲೆ ಮಾಡಲಾಗಿದೆ.

Advertisement

ಪ್ರಭುಸ್ವಾಮಿ(50)ಯನ್ನು ಅಳಿಯ ಅಜಯ್(22) ಕೊಲೆ ಮಾಡಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ. 7 ವರ್ಷದ ಹಿಂದೆ ಪತಿಯನ್ನು ಬಿಟ್ಟು ಸಾವಿತ್ರಮ್ಮ ತವರು ಸೇರಿದ್ದಾರೆ.

ಜಮೀನು ವಿಚಾರವಾಗಿ ಆಗಾಗ್ಗೆ ತಂಗಿ ಜತೆ ಪ್ರಭುಸ್ವಾಮಿ ಜಗಳವಾಡುತ್ತಿದ್ದ. ಮದ್ಯಸೇವಿಸಿ ಬಂದು ತಂಗಿ, ಆಕೆಯ ಮಗಳನ್ನು ನಿಂದಿಸುತ್ತಿದ್ದ. ವಿಷಯ ತಿಳಿದು ಗಂಜಿಗೆರೆ ಗ್ರಾಮಕ್ಕೆ ಆಗಮಿಸಿದ ಅಳಿಯ ಅಜಯ್, ಮಾವ ಪ್ರಭುಸ್ವಾಮಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.


Spread the love

LEAVE A REPLY

Please enter your comment!
Please enter your name here