ಹಂಪಿ ಕನ್ನಡ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಪ್ರತಿಭಟನೆ

0
Spread the love

ವಿಜಯನಗರ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುರಿತು ಫೇಸ್‌ʼಬುಕ್‌ʼನಲ್ಲಿ ನಿಂದನಾತ್ಮಕ ಪೋಸ್ಟ್ ಬರೆದ ಮುರಳಿ ಕೃಷ್ಣಮದ್ದಿಕೇರಿ ವಿರುದ್ಧ ಸುಮೊಟೊ ಕೇಸ್ ದಾಖಲು ಮಾಡಿ ಎಂದು ಕನ್ನಡ ವಿಶ್ವ ವಿದ್ಯಾಲಯದ, ಸಂಶೋಧನಾ ವಿದ್ಯಾರ್ಥಿಗಳು, ಉಪಕುಲಸಚಿವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

Advertisement

ವಿಶ್ವವಿದ್ಯಾಲಯ ‘ಬಿ’ ಗೇಟ್ ಮೂಲಕ ಪತ್ರಿಭಟನೆ ಆರಂಭಿಸಿದ ಸಂಶೋಧನಾ ವಿದ್ಯಾರ್ಥಿಗಳ ಕುಲಪತಿ ಕಚೇರಿ ತಲುಪಿ ಉಪಕುಲಸಚಿವರಿಗೆ ಮನವಿಯನ್ನು ಪತ್ರ ಸಲ್ಲಿಸಿದರು. ಜ್ಞಾನಪೀಠ ಪ್ರಶಸ್ತಿ ಪಡೆದ ಡಾ. ಚಂದ್ರಶೇಖರ್ ಕಂಬಾರರ ನೇತೃತ್ವದಲ್ಲಿ ಪ್ರಾರಂಭವಾಗಿ ಕರ್ನಾಟಕದ ಹೆಮ್ಮೆಯ ಗುರುತಾಗಿರುವ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ತನ್ನ ಸಂಶೋಧನಾ ಕೊಡುಗೆಗಳಿಂದ ಇಡೀ ದೇಶದಲ್ಲಿಯೇ ಮಾದರಿ ವಿಶ್ವವಿದ್ಯಾಲಯ ಎಂಬ ಕೀರ್ತಿಗೆ ಪಾತ್ರವಾಗಿರುತ್ತದೆ.

ಈ ವಿಶ್ವವಿದ್ಯಾಲಯವು ಕನ್ನಡ ನಾಡು, ನುಡಿ, ಸಂಸ್ಕೃತಿ, ಕನ್ನಡ ಸಮಾಜದ ಕುರಿತು ಅತ್ಯಂತ ಕಾಳಜಿಯಿಂದ ಅಧ್ಯಯನ ಮಾಡುವ ಮೂಲಕ ಜನರ ನಡುವೆ ಇರುವ ತಿಳುವಳಿಕೆಗಳನ್ನು ಜ್ಞಾನವೆಂದು ಗುರುತಿಸುವ ಮಹತ್ವದ ಕೆಲಸವನ್ನು ಮಾಡುತ್ತಿರುವ ವಿಶ್ವವಿದ್ಯಾಲಯವಾಗಿದೆ. ಇಂತಹ ವಿವಿಯನ್ನು ಮುಚ್ಚಬೇಕು ಅಂತ FB ಪೋಸ್ಟ್ ಹಾಕಿದ ಮುರಳಿಕೃಷ್ಣ ಮದ್ದಿಕೇರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಅಂತ ಒತ್ತಾಯಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here