HomeVijayanagarತಿಪ್ಪಣ್ಣ ಕಮಕನೂರ್‌ಗೆ ಸಚಿವ ಸ್ಥಾನ ನೀಡಿ!

ತಿಪ್ಪಣ್ಣ ಕಮಕನೂರ್‌ಗೆ ಸಚಿವ ಸ್ಥಾನ ನೀಡಿ!

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ವಿಜಯನಗರ ಜಿಲ್ಲೆಯ ಹಿಂದುಳಿದ ವರ್ಗಗಳ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಹಾಗೂ ಅವರ ವಿಧಾನ ಪರಿಷತ್ ಸದಸ್ಯತ್ವ ಅವಧಿಯನ್ನು ಮುಂದಿನ ಆರು ವರ್ಷಗಳಿಗೆ ವಿಸ್ತರಿಸಬೇಕು ಎಂದು ವಿಜಯನಗರ ಜಿಲ್ಲಾ ಗಂಗಾಮತ ಬೆಸ್ತ ಸಮಾಜ ಸಂಘ ಸರ್ಕಾರವನ್ನು ಒತ್ತಾಯಿಸಿದೆ.
ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯನಗರ ಜಿಲ್ಲಾ ಗಂಗಾಮತ ಬೆಸ್ತ ಸಮಾಜದ ಜಿಲ್ಲಾಧ್ಯಕ್ಷ ಅಂಬಾಡಿ ನಾಗರಾಜ್, “ಗಂಗಾಮತ, ಬೆಸ್ತ, ಕೋಲಿ ಹಾಗೂ ಕಬ್ಬಲಿಗ ಸಮಾಜದ ಪ್ರತಿನಿಧಿಯಾಗಿ ತಿಪ್ಪಣ್ಣ ಕಮಕನೂರ್ ಅವರು ಹಲವು ವರ್ಷಗಳಿಂದ ಸಾಮಾಜಿಕ ಹೋರಾಟ ನಡೆಸಿದ್ದಾರೆ. ಆಡಳಿತದ ಅನುಭವ ಹೊಂದಿರುವ ಅವರು ಜನಪರ ಕಾಳಜಿಯ ನಾಯಕ” ಎಂದು ಹೇಳಿದರು.
ಜೂನ್ 2026ಕ್ಕೆ ತಿಪ್ಪಣ್ಣ ಕಮಕನೂರ್ ಅವರ ನಾಲ್ಕು ವರ್ಷದ ಸದಸ್ಯತ್ವ ಅವಧಿ ಪೂರ್ಣಗೊಳ್ಳಲಿದ್ದು, ಅವರ ಅನುಭವ ಹಾಗೂ ಸಮಾಜಪರ ಸೇವೆಯನ್ನು ಗಮನಿಸಿ ಮುಂದಿನ ಆರು ವರ್ಷಗಳಿಗೂ ಅವಧಿ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸಚಿವ ಸಂಪುಟದಲ್ಲಿ ತಿಪ್ಪಣ್ಣ ಕಮಕನೂರ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಹಿಂದುಳಿದ ವರ್ಗಗಳ ಧ್ವನಿಯಾಗಿ ಕೆಲಸ ಮಾಡುತ್ತಿರುವ ನಾಯಕರಿಗೆ ಸರ್ಕಾರ ಸೂಕ್ತ ಗೌರವ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸರ್ದಾರ್ ಯಮನೂರಪ್ಪ, ಬಾರಿಕರ ಪರಶುರಾಮ್, ಸೂರ್ಯ ನಾರಾಯಣಪ್ಪ, ಸರ್ದಾರ್ ಜೀವಪ್ಪ, ಎಲ್ಐಸಿ ಪರಶುರಾಮ್, ಸರ್ದಾರ ಸಿದ್ದಪ್ಪ, ವೆಂಕಟೇಶ್ ವಲ್ಲಭಾಪುರ, ಪೂಜಾರ್ ಶ್ರೀನಿವಾಸ್, ಅಂಬಿಗರ ಮಂಜುನಾಥ, ಅಕಾರಿ ಸುನಿಲ್, ಅಂಬಿಗರ ಪುನೀತ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!