HomeIndia Newsಅಮಾನತ್ತಾದ ಸಂಸದರಿಂದ ಸಂಸತ್ ಲಾನ್‌ನಲ್ಲಿ ಅಹೋರಾತ್ರಿ ಧರಣಿ

ಅಮಾನತ್ತಾದ ಸಂಸದರಿಂದ ಸಂಸತ್ ಲಾನ್‌ನಲ್ಲಿ ಅಹೋರಾತ್ರಿ ಧರಣಿ

For Dai;y Updates Join Our whatsapp Group

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಸೋಮವಾರ ರಾಜ್ಯಸಭೆಯಲ್ಲಿ ವಾರ ಕಾಲ ಅಮಾನತ್ತಾದ 8 ಸಂಸದರು ಸಂಸತ್ ಆವರಣದ ಹುಲ್ಲುಹಾಸಿನಲ್ಲಿ ತಮ್ಮ ಪ್ರತಿಭಟನೆಯನ್ನು ಇನ್ನೂ ಮುಂದುವರೆಸಿದ್ದಾರೆ.

ಮಂಗಳವಾರ ಮುಂಜಾನೆ ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಸಂಸದರ ಬಳಿ ಹೋಗಿ ಚಹಾ ಸೇವಿಸಲು ಕೋರಿದರು. ಉಪ ಸಭಾಪತಿಯವರ ‘ಟೀ-ಪಾರ್ಟಿ’ ನಿರಾಕರಿಸಿದ ಎಂಟೂ ಸಂಸದರು ಅವರನ್ನು ‘ರೈತ ವಿರೋಧಿ’ ಎಂದು ಟೀಕಿಸಿದರು.

ಭಾನುವಾರ 2 ಕೃಷಿ ಮಸೂದೆಗಳನ್ನು ಭೌತಿಕ ಮತದಾನದ ಬದಲು ಧ್ವನಿಮತಕ್ಕೆ ಹಾಕಿದ್ದನ್ನು ವಿರೋಧಿಸಿ ವಿಪಕ್ಷ ಸಂಸದರು ರಾಜ್ಯಸಭೆಯಲ್ಲಿ ಪ್ರತಿಭಟನೆ, ಗದ್ದಲ ನಡೆಸಿದ್ದರು. ಸೋಮವಾರ ರಾಜ್ಯಸಭಾ ಸಭಾಪತಿ ವೆಂಕಯ್ಯನಾಯ್ಡು 8 ವಿಪಕ್ಷ ಸಂಸದರನ್ನು 7 ದಿನದವರೆಗೆ ಕಲಾಪದಿಂದ ಅಮಾನತ್ತು ಮಾಡಿದ್ದರು.

ಈ ಸಂಸದರು ಕಲಾಪ ತೊರೆಯಲು ನಿರಾಕರಿಸಿದಾಗ ಸದನವನ್ನು ಮಂಗಳವಾರಕ್ಕೆ ಮುಂದೂಡಲಾಗಿತ್ತು.
ನಂತರ ಈ ಸಂಸದರು ಸಂಸತ್ ಆವರಣದ ಹುಲ್ಲುಹಾಸಿನನಲ್ಲಿ ‘ರೈತ ವಿರೋಧಿ ಸರ್ಕಾರ’ ಎಂಬ ಪ್ಲೆಕಾರ್ಡ್ ಹಿಡಿದು ಕುಳಿತುಕೊಂಡು ಪ್ರತಿಭಟನೆ ನಡೆಸುತ್ತಿದ್ದು, ರಾತ್ರಿಯಿಡಿ ಲಾನ್‌ನಲ್ಲೇ ಕಳೆದಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img