ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ತಾಲೂಕಿನ ಹುಯಿಲಗೋಳ ಬಳಿ ಈ ಘಟನೆ ನಡೆದಿದ್ದು, ಮೃತ ದುರ್ದೈವಿಗಳು, ಬಾಹುಬಲಿ ಅಂಬೋಜಿ(38), ಪ್ರಭು ಅಂಕದ(48) ಎಂದು ತಿಳಿದುಬಂದಿದೆ.
ಬಾಹುಬಲಿ, ಹುಯಿಲಗೋಳ ನಿವಾಸಿ, ಪ್ರಭು ಅಂಕದ, ಹಿರೆವಡ್ಡಟ್ಟಿ ನಿವಾಸಿಗಳಾಗಿದ್ದು, ಬಾಹುಬಲಿ, ಹುಯಿಲಗೋಳ ಖಾಸಗಿ ಸ್ಕೂಲ್ ಬಸ್ ಚಾಲಕನಾಗಿದ್ದರೆ, ಪ್ರಭು ಅಂಕದ ಹೊಳೆಆಲೂರ ಖಾಸಗಿ ಕಾಲೇಜ್ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮಳೆ ಬರುತ್ತದೆಂದು ವೇಗವಾಗಿ ಬರುವ ವೇಳೆ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಡಿವೈಎಸ್ಪಿ ಕೆ, ಪ್ರಲ್ಹಾದ, ಪಿಎಸ್ಐ ಕಮಲಾ ದೊಡ್ಡಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.