ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ಅವಳಿ ನಗರದ ಹೃದಯ ಭಾಗದಲ್ಲಿರುವ ಬಸವೇಶ್ವರ ನಗರದ ಕಾಮನಕಟ್ಟಿ ಹತ್ತಿರದಲ್ಲಿ ಹಲವು ವರ್ಷಗಳಿಂದ ಇದ್ದ ಮೂತ್ರಾಲಯವನ್ನು ಅಭಿವೃದ್ಧಿ ಹೆಸರಿನಲ್ಲಿ ಚರಂಡಿ ಪುನರ್ ನಿರ್ಮಾಣ ಕಾರ್ಯಕ್ಕಾಗಿ ತೆರವುಗೊಳಿಸಿ ಸುಸರ್ಜಿತವಾಗಿ ಇದ್ದ ಮೂತ್ರಾಲಯವನ್ನು ಅವ್ಯವಸ್ಥೆಯ ಮೂತ್ರಾಲಯವನ್ನಾಗಿ ಪರಿರ್ವತಿಸಿ ಸಾರ್ವಜನಿಕರಿಗೆ ಮೂತ್ರಾಲಯಕ್ಕೆ ಹೋಗಲು ಮುಜುರವಾಗು ಪರಿಸ್ಥಿತಿ ಎದುರಾಗಿದೆ.
ಬಸವೇಶ್ವರ ನಗರದಲ್ಲಿ ಇದ್ದ ಒಂದೇ ಒಂದು ಮೂತ್ರಾಲಯದ ಕಥೆೆ ಇದಾದರೆ, ಸಾರ್ವಜನಿಕರು ಯಾವ ಮಾರ್ಗ ಕಂಡುಕೊಳ್ಳಬೇಕು ಎನ್ನುವುದು ಪ್ರಶ್ನೆಯಾಗಿದೆ. ಕಾರಣ, ಸಂಬಂಧಿಸಿದವರು ಇತ್ತ ಗಮನ ಹರಿಸಿ ಸಾರ್ವಜನಿಕರಿಗೆ ಆಗಿರುವ ಅನಾನುಕೂಲವನ್ನು ಸರಿಪಡಿಸಬೇಕು ಎಂದು ಅರಿವು ಫೌಂಡೇಶನ್ ಅಧ್ಯಕ್ಷ ವಿಶ್ವನಾಥ ಶೀರಿ ವಿನಂತಿಸಿದ್ದಾರೆ.



