ಕನ್ನಡ ವಿಧೇಯಕ ಕಟ್ಟುನಿಟ್ಟಾಗಿ ಜಾರಿಗೊಳಿಸಿ

0
karave manavi
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ಸರ್ಕಾರವು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ ಜಾರಿಗೊಳಿಸಿ ಎಲ್ಲಾ ವರ್ತಕರು ತಮ್ಮ ತಮ್ಮ ಅಂಗಡಿ ಮುಂಗಟ್ಟು, ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಶೇ. 60ರಷ್ಟು ಕನ್ನಡವನ್ನು ಬಳಸಬೇಕು ಎಂದು ವಿಧೇಯಕವನ್ನು ಜಾರಿಗೊಳಿಸಿದೆ. ಗದಗ ತಾಲೂಕಿನಲ್ಲಿ ಸದರಿ ವಿಧೇಯಕ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಗದಗ ತಾಲೂಕು ಘಟಕದ ವತಿಯಿಂದ ಗದಗ ತಹಸೀಲ್ದಾರರವರಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಗದಗ ತಾಲೂಕು ಘಟಕದ ಅಧ್ಯಕ್ಷ ದಾವಲಸಾಬ ಎಂ.ತಹಸೀಲ್ದಾರ, ಪ್ರಧಾನ ಕಾರ್ಯದರ್ಶಿ ಮಹಾಂತೇಶ ನಡಗೇರಿ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಮೇಟಿ, ಮುಖಂಡರಾದ ವಿನಾಯಕ ಬದಿ, ತೌಸಿಫ ಢಾಲಾಯತ, ಹುಸೇನ ಅಕ್ಕಿ, ಸಲೀಮ ಶಿರವಾರ, ಇಸಾಕ ನದಾಫ, ಮುಬಾರಕ ಮುಲ್ಲಾ, ಆಝಾದ ನಾಗನೂರ, ಯಲ್ಲೇಶ ಬಳ್ಳಾರಿ, ಸದ್ದಾಂ ಹುಸೇನ ತಹಸೀಲ್ದಾರ, ಶಬ್ಬೀರ ಹಂಜಗಿ, ಗೌಸುಸಾಬ ಶಿರಹಟ್ಟಿ, ರವಿ ಮಲ್ಲಾಡ, ಇಮ್ರಾನ್ ಮುಂತಾದವರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here