Homecultureಪುಲಿಗೆರೆ ಉತ್ಸವ ಏ.19ರಿಂದ

ಪುಲಿಗೆರೆ ಉತ್ಸವ ಏ.19ರಿಂದ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ :ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಇನ್‌ಫೋಸಿಸ್ ಪ್ರತಿಷ್ಠಾನ ಹಾಗೂ ಭಾರತೀಯ ವಿದ್ಯಾಭವನದ ಆಶ್ರಯದಲ್ಲಿ ಕಳೆದ 6 ವರ್ಷಗಳಿಂದ ಪುಲಿಗೆರೆ ಉತ್ಸವ ನಡೆಸುತ್ತಾ ಬರಲಾಗಿದ್ದು. ಈ ವರ್ಷವೂ ಏ.19, 20 ಮತ್ತು 21ರಂದು 7ನೇ ವರ್ಷದ ಸಂಗೀತ-ನೃತ್ಯ-ಚಿತ್ರ ಸಂಭ್ರಮಗಳ ಪುಲಿಗೆರೆ ಉತ್ಸವದ ಸಾಂಸ್ಕೃತಿಕ ಮೆರುಗು ಮೇಳೈಸಲಿದೆ ಎಂದು ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ಕೆ.ರಾವ್ ಹೇಳಿದರು.

ಅವರು ಬುಧವಾರ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀ ಸೋಮೆಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಸಹಯೋಗದಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಐತಿಹಾಸ ಪ್ರಸಿದ್ಧ ಸೋಮೇಶ್ವರ ದೇವಸ್ಥಾನವನ್ನು ಇನ್‌ಫೋಸಿಸ್‌ನ ಡಾ.ಸುಧಾಮೂರ್ತಿಯರು ತಮ್ಮ ಪ್ರತಿಷ್ಠಾನದಿಂದ 5 ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿದ್ದಾರೆ. ಬಳಿಕ ದೇವಸ್ಥಾನದಲ್ಲಿ ಸಂಗೀತ, ನೃತ್ಯ, ಇತಿಹಾಸ ಹೀಗೆ ಸಾಂಸ್ಕೃತಿಕ ಪರಂಪರೆ ಮುಂದುವರೆಯಬೇಕು ಎಂಬ ಉದ್ದೇಶದಿಂದ ತಮ್ಮದೇ ಪ್ರತಿಷ್ಠಾನದಿಂದ ಲಕ್ಷಾಂತರ ರೂ ಖರ್ಚು ಮಾಡಿ ಪ್ರತಿ ವರ್ಷ 3 ದಿನಗಳ ಕಾಲ ಪುಲಿಗೆರೆ ಉತ್ಸವ ಕಾರ್ಯಕ್ರಮ ನಡೆಸುತ್ತಿದ್ದಾರೆ.

ನಾಡಿನ ನಾನಾ ಮೂಲೆಗಳ ಪ್ರಸಿದ್ಧ ಸಂಗೀತಕಾರರು, ನೃತ್ಯಪಟುಗಳು, ಚಿತ್ರಕಲಾವಿದರನ್ನು ಗುರುತಿಸಿ ಅವರನ್ನು ನಿಮ್ಮಲ್ಲಿಗೆ ಕರೆತಂದು ಅವರ ಮೂಲಕ ಇಲ್ಲಿನ ಜನರಿಗೆ ಸಂಗೀತದ ರಸದೌತಣ ನೀಡುವ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಭಾರತೀಯ ವಿದ್ಯಾಭವನ ಹೊರತುಪಡಿಸಿದರೆ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಯುತ್ತಿರುವದು ಲಕ್ಷ್ಮೇಶ್ವರದ ಪುಲಿಗೆರೆ ಉತ್ಸವದಲ್ಲಿ ಮಾತ್ರ. ಈ ಕಾರ್ಯಕ್ರಮಕ್ಕೆ ಈ ಭಾಗದ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ನ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಮತ್ತು ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, ಪುರಾತನ ಇತಿಹಾಸ ಹಾಗೂ ಪರಂಪರೆಗೆ ಹೆಸರಾದ ದೇವಸ್ಥಾನವನ್ನು ಡಾ.ಸುಧಾ ನಾರಾಯಣಮೂರ್ತಿಯವರು ಕೋಟ್ಯಾಂತರ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿ, ದೇವಸ್ಥಾನಕ್ಕೆ ಗತವೈಭವದ ಮೆರಗು ತಂದುಕೊಡಲು ಪ್ರತಿವರ್ಷ ಪುಲಿಗೆರೆ ಉತ್ಸವ ಹೆಸರಿನಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ನಮಗೆಲ್ಲ ಹೆಮ್ಮೆ. ಈ ವರ್ಷವೂ ಪುಲಿಗೆರೆ ಉತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಸಂಭ್ರಮಿಸಿಸೋಣ, ಸಹಕರಿಸೋಣ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ವಿದ್ಯಾಭವನ ಗೋವಿಂದ ಕುಲಕರ್ಣಿ, ಕುಬೇರಪ್ಪ ಮಹಾಂತಶೆಟ್ಟರ, ಚನ್ನಪ್ಪ ಜಗಲಿ, ಸಿದ್ದನಗೌಡ ಬಳ್ಳೊಳ್ಳಿ, ಮಾಲಾದೇವಿ ದಂದರಗಿ, ಗೀತಾ ಮಾನ್ವಿ, ಸುರೇಶ ರಾಚನಾಯ್ಕರ, ಎಸ್.ಪಿ. ಪಾಟೀಲ, ಸುಮಾ ಚೋಟಗಲ್, ವಿ.ಜಿ. ಪಡಗೇರಿ, ಪೂರ್ಣಾಜಿ ಕರಾಟೆ, ವಿ.ಜಿ. ಪಡಗೇರಿ, ಪ್ರವೀಣ ಬಾಳಿಕಾಯಿ, ನೀಲಪ್ಪ ಕರ್ಜೆಕಣ್ಣವರ, ರಾಘವೇಂದ್ರ ಪೂಜಾರ, ಜಿ.ಎಸ್. ಗುಡಗೇರಿ, ವಿರುಪಾಕ್ಷ ಆದಿ, ಬಸವರಾಜ ಮೆಣಸಿನಕಾಯಿ, ಮಲ್ಲೇಶಪ್ಪ ಕಣವಿ, ನೀಲಪ್ಪ ಕನವಳ್ಳಿ, ಸೋಮಣ್ಣ ಅಣ್ಣಿಗೇರಿ, ಬಿ.ಎಸ್. ಬಾಳೇಶ್ವರಮಠ, ಈಶ್ವರ ಮೇಡ್ಲೇರಿ, ಡಿ.ಬಿ. ಬಳಿಗಾರ ಮುಂತಾದವರಿದ್ದರು.

ಏ.19ರಂದು ಬೆಳಿಗ್ಗೆ 6 ಗಂಟೆಗೆ ಪುಲಿಗೆರೆ ಉತ್ಸವ ಕಾರ್ಯಕ್ರಮವನ್ನು ಭಾರತೀಯ ವಿದ್ಯಾಭವನದ ಜಂಟಿನಿರ್ದೇಶಕಿ ನಾಗಲಕ್ಷ್ಮಿ ಕೆ.ರಾವ್ ಉದ್ಘಾಟಿಸಲಿದ್ದಾರೆ. ಸಂಜೆ 4ಕ್ಕೆ ಸೋಮೇಶ್ವರನ ಪಲ್ಲಕ್ಕಿ ಉತ್ಸವ ನೆರವೇರಲಿದೆ. ಮೆರವಣಿಗೆ ಇನ್‌ಫೋಸಿಸ್ ಪ್ರತಿಷ್ಠಾನದ ಸಿಎಸ್‌ಆರ್ ವಿಭಾಗದ ವ್ಯವಸ್ಥಾಪಕ ಪ್ರಶಾಂತ ಹೆಗಡೆ ಚಾಲನೆ ನೀಡುವರು. ನಿತ್ಯ ಬೆಳಿಗ್ಗೆ 6ರಿಂದ 8 ಗಂಟೆವರೆಗೆ ಉದಯರಾಗ ಮತ್ತು ಸಂಜೆ 6ರಿಂದ 9.30ರವರೆಗೆ ಸಂಧ್ಯಾರಾಗ ಕಾರ್ಯಕ್ರಮಗಳು ಜರುಗಲಿವೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!