ಗದಗ: ಗದಗದ ಸಹನಾ ಎ. ಕಾರ್ಕಳ ಅವರು L.L.M. ಪದವಿಯಲ್ಲಿ ಗೋಲ್ಡ್ ಮೆಡಲ್ ಸಮೇತ ರಾಜ್ಯಕ್ಕೆ ಫಸ್ಟ್ ರ್ಯಾಂಕ್ ಗಳಿಸಿದ್ದು, ಈ ಸಾಧನೆಗಾಗಿ ಕರ್ನಾಟಕ ಉತ್ತರ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸಾಮರಸ್ಯ ವೇದಿಕೆ ಪದಾಧಿಕಾರಿಗಳು ಗೌರವಿಸಿ ಶುಭ ಕೋರಿದರು.
ಸಹನಾ ಕಾರ್ಕಳ ನಿವಾಸಕ್ಕೆ ಸಾಮರಸ್ಯ ವೇದಿಕೆ ತಂಡ ಆಗಮಿಸಿ ಗೌರವಿಸಿದ ನಂತರ ವಿಡಿಎಸ್ ಟಿಸಿ ಕಾಲೇಜ್ ಪ್ರಾಚಾರ್ಯರು, ಸಂಘದ ಪ್ರಮುಖರಾದ ಮಾರುತಿ ಕಟ್ಟಿಮನಿಯವರು ಮಾತನಾಡಿ, ಸತತ ಅಧ್ಯಯನ, ಉತ್ತಮ ಸಂಸ್ಕಾರ, ಪಾಲಕರ ಪ್ರೋತ್ಸಾಹ ದೊರೆತರೆ ಎಂತಹ ಸಾಧನೆ ಮಾಡಬಹುದು ಎಂಬುದಕ್ಕೆ ಸಹನಾ ಕಾರ್ಕಳ ಸಾಕ್ಷಿಯಾಗಿದ್ದಾರೆ ಎಂದರು.
ಸಾಧನೆ ಯಾರ ಸ್ವತ್ತಲ್ಲ, ಆದರೆ ಸಾದಿಸುವ ಸಾಹಸ, ಛಲ ಮತ್ತು ಜಾಣ್ಮೆ ಇರಬೇಕು. ಬರುವ ಸವಾಲುಗಳನ್ನೆ ಸಾಧನವಾಗಿ ಬಳಸಿಕೊಂಡ್ರೆ ಏನೆಲ್ಲ ಸಾಧನೆ ಮಾಡಬಹುದು ಎಂಬುದಕ್ಕೆ ಸಹನಾ ಕಾರ್ಕಳ ಸ್ಪಷ್ಟ ಎಕ್ಸಾಂಪಲ್ ಎಂದು ಮಾರುತಿ ಕಟ್ಟಿಮನಿ ಹೇಳಿದರು.
ಈ ವೇಳೆ ಕರ್ನಾಟಕ ಉತ್ತರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಮರಸ್ಯ ವೇದಿಕೆ ಪದಾಧಿಕಾರಿಗಳಾದ ಡಾ.ಉಮೇಶ ಹಾದಿ, ಡಾ.ಪ್ರಕಾಶ ಹೊಸಮನಿ, ರವಿಕಾಂತ ಅಂಗಡಿ, ಪ್ರೊ.ಹನುಮಂತ ಕಾಳೆ ಪ್ರೊ.ಶಶಿಧರ ಕುರಿ, ಡಾ.ಅನಂತ ಎಸ್.ಕಾರ್ಕಳ, ಶ್ರೀಮತಿ ಮಂಗಳಾ ಕಾರ್ಕಳ ಉಪಸ್ಥಿತರಿದ್ದರು.

