ಬೆಂಗಳೂರು: ಉಪಚುನಾವಣೆ ಹಿನ್ನಲೆಯಲ್ಲಿ ಶಾಸಕ ಪ್ರದೀಪ್ ಈಶ್ವರ್ ಮುಸ್ಲಿಂ ಸಮುದಾಯದ ಮತದಾರರಿಗೆ ಮನವಿ ಮಾಡಿದ್ದಾರೆ. ದಾವಣಗೆರೆಯ ಮುಸ್ಲಿಂ ಬಾಂಧವರು ತಮ್ಮ ತಮ್ಮ ಸಮರ್ಥ್ಗೆ ಬೆಂಬಲ ನೀಡಬೇಕು ಎಂದು ಅವರು ವಿನಂತಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ನಾಯಕರು ಮುಸ್ಲಿಂ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಕಾಂಗ್ರೆಸ್ ನಿಮ್ಮ ಪರ ನಿಂತಿದೆ. ಹಿಂದೂಗಳಾದ ನಾವು ಕೂಡ ಬಿಜೆಪಿ ವಿರುದ್ಧ ನಿಂತಿದ್ದೇವೆ ಎಂದು ಹೇಳಿದರು.
ಅಹಿಂದ ಮತದಾರರು ಕಾಂಗ್ರೆಸ್ಗೆ ಮತಹಾಕಬೇಕು. ದಾವಣಗೆರೆ ಸೇರಿದಂತೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ಇದೇ ವೇಳೆ ಬಿಜೆಪಿ ನಾಯಕ ಆರ್. ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರದೀಪ್ ಈಶ್ವರ್, ಶ್ರೀಮಂತಿಕೆ ಮತ್ತು ಬಡವರ ಬಗ್ಗೆ ಅವರು ಮಾತನಾಡುವುದು ಆಶ್ಚರ್ಯಕರ. ಕಂದಾಯ ಸಚಿವರಾಗಿದ್ದಾಗ ಎಷ್ಟು ಆಸ್ತಿ ಮಾಡಿದ್ದಾರೆ ಎಂಬುದನ್ನು ವೈಟ್ ಪೇಪರ್ನಲ್ಲಿ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

