ರಾಮನಗರ: ಬಿಡದಿ ಟೌನ್ಶಿಪ್ ಯೋಜನೆ ವಿರುದ್ಧದ ಹೋರಾಟಕ್ಕೆ ಬಿಜೆಪಿ-ಜೆಡಿಎಸ್ ನೀಡಿರುವ ಬೆಂಬಲಕ್ಕೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಪೋಸ್ಟರ್ ವಾರ್ ಮೂಲಕ ತೀವ್ರ ರಾಜಕೀಯ ಪ್ರತ್ಯುತ್ತರ ನೀಡಿದೆ.
ಬಿಡದಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಅಂಟಿಸಲಾದ ಪೋಸ್ಟರ್ಗಳಲ್ಲಿ ಮೈತ್ರಿಪಕ್ಷ ನಾಯಕರ ವಿರುದ್ಧ ನೇರ ಮತ್ತು ವ್ಯಂಗ್ಯಾತ್ಮಕ ಟೀಕೆಗಳು ಕಾಣಿಸಿಕೊಂಡಿವೆ. ರೈತರ ಭೂಮಿ ವಿಚಾರದಿಂದ ಆರಂಭವಾಗಿ ವಿವಿಧ ಆರೋಪಗಳನ್ನು ಒಳಗೊಂಡ ಸಂದೇಶಗಳು ಪೋಸ್ಟರ್ಗಳಲ್ಲಿ ಪ್ರಕಟವಾಗಿವೆ.
ಬಿಜೆಪಿ ನಾಯಕ ಆರ್. ಅಶೋಕ್, ನಾರಾಯಣಸ್ವಾಮಿ ಹಾಗೂ ವಿಜಯೇಂದ್ರ ಅವರನ್ನು ಉಲ್ಲೇಖಿಸಿ ಕಠಿಣ ಭಾಷೆಯ ಟೀಕೆಗಳು ಪೋಸ್ಟರ್ನಲ್ಲಿ ಬಳಕೆ ಮಾಡಲಾಗಿದೆ. ಜೊತೆಗೆ ಜೆಡಿಎಸ್ ನಾಯಕರಾದ ಹೆಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರ ಚಿತ್ರಗಳನ್ನು ಸೇರಿಸಿ ರಾಜಕೀಯ ಆರೋಪಾತ್ಮಕ ಸಂದೇಶಗಳನ್ನು ಹಾಕಲಾಗಿದೆ.
ಈ ಪೋಸ್ಟರ್ ಅಭಿಯಾನದಿಂದ ಬಿಡದಿಯಲ್ಲಿ ರಾಜಕೀಯ ತಾಪಮಾನ ಹೆಚ್ಚಿದ್ದು, ಬಿಜೆಪಿ-ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಮಾತಿನ ಕದನ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.

